Saturday, June 28, 2025
spot_imgspot_img
spot_imgspot_img

ಪುತ್ತೂರು: ವಿದ್ಯುತ್ ಸ್ಪರ್ಶಗೊಂಡು ಉದ್ಯಮಿಯ ಸಾವು ! -ಮಂಗಳೂರು ಇನ್ ಫೋಟೆಕ್ ಸಂಸ್ಥೆಯ ಮಾಲಕ ರವೀಂದ್ರ ಪೂಜಾರಿ ಮೃತಪಟ್ಟ ದುರ್ದೈವಿ

- Advertisement -
- Advertisement -

ಪುತ್ತೂರು: ಪುತ್ತೂರಿನ ಅಜ್ಜಿಕಲ್ಲು ಎಂಬಲ್ಲಿ ವಿದ್ಯುತ್ ಪ್ರವಹಿಸಿ ಉದ್ಯಮಿ ಮೃತ ಪಟ್ಟ ದಾರುಣ ಘಟನೆ ನಡೆದಿದೆ.

ಮನೆಯ ತೋಟದಲ್ಲಿ ಅಡಿಕೆ ಕೊಯ್ಯುತ್ತಿದ್ದ ವೇಳೆ ಕೊಕ್ಕೆಯ ಮೂಲಕ ವಿದ್ಯುತ್ ಪ್ರವಾಹಗೊಂಡು ಅಜ್ಜಿಕಲ್ಲು ನಿವಾಸಿ ಬಾಬು‌ಪೂಜಾರಿ ಅವರ ಪುತ್ರ ಮಂಗಳೂರು ಬಿಜೈ ಯಲ್ಲಿ ಜೆ.ಡಿ.ಎ. ಇನ್ ಫೋಟೆಕ್ ಸಂಸ್ಥೆಯ ಮಾಲಕ ರವೀಂದ್ರ ಪೂಜಾರಿ(34ವ) ರವರು ಮೃತಪಟ್ಟಿದ್ದಾರೆ.

ಅವರು ಕ್ರಿಸ್ ಮಸ್ ರಜಾ ಅವಧಿಯಲ್ಲಿ ಅಜ್ಜಿಕಲ್ಲು ಮನೆಗೆ ಬಂದವರು ಮನೆಯ ತೋಟದಲ್ಲಿ ಅಡಿಕೆಮರ ಏರಿ ಕೊಕ್ಕೆಯ ಮೂಲಕ ಅಡಿಕೆ ಗೊಣೆ ತೆಗೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಗೊಂಡು ಮೃತಪಟ್ಟಿದ್ದಾರೆ.

ಶಾಸಕ ಸಂಜೀವ ಮಠಂದೂರು ಅವರು ಪುತ್ತೂರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

- Advertisement -

Related news

error: Content is protected !!