





ಪುತ್ತೂರು: ಬಾರ್ ಸಿಬ್ಬಂದಿಯೋರ್ವರಿಗೆ ತಂಡದಿಂದ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿ ಹಲ್ಲೆ ನಡೆಸಿದ ಘಟನೆ ಪುತ್ತೂರು ಬೈಪಾಸ್ನಲ್ಲಿರುವ ನಿರಾಳ ಬಾರ್ನಲ್ಲಿ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಪುತ್ತೂರು ಕಸ್ಬಾ ಗ್ರಾಮ, ದರ್ಬೆ ಅಂಚೆ, ಪುತ್ತೂರು ನಿವಾಸಿ ಜಗದೀಶ್ ರೈ (45) ಹಾಗೂ ಆರೋಪಿಯನ್ನು ರಾಜಾರಾಮ್ ಭಟ್ ಎಂದು ಗುರುತಿಸಲಾಗಿದೆ.
ಜಗದೀಶ್ ರೈ ಎಂಬವರ ದೂರಿನಂತೆ ಡಿ. 14ರಂದು ರಾತ್ರಿ ವೇಳೆ ಅರೋಪಿಗಳಾದ ರಾಜಾರಾಮ್ ಭಟ್ ಮತ್ತು ಇತರ ಇಬ್ಬರು ಬಾರ್ಗೆ ಬಂದವರು, ರಾತ್ರಿ ಬಾರ್ ಮುಚ್ಚುವ ಸಮಯವಾದರೂ ಹೋಗದೇ ತಕರಾರು ಮಾಡಿದ್ದು, ಆರೋಪಿತರಿಗೆ ಈ ಬಗ್ಗೆ ತಿಳಿಸಿದಾಗ ಆರೋಪಿತರ ಪೈಕಿ ರಾಜಾರಾಮ್ ಭಟ್ ಎಂಬವರು ಒಮ್ಮೆಲೇ ಕೋಪದಿಂದ ಜಗದೀಶ್ ಎಂಬರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿ ಹಲ್ಲೆ ನಡೆಸಿರುತ್ತಾರೆ. ಜೊತೆಯಲ್ಲಿದ್ದ ಇತರ ಇಬ್ಬರು ವ್ಯಕ್ತಿಗಳು ಜಗದೀಶ್ರನ್ನು ಉದ್ದೇಶಿಸಿ ಅವ್ಯಾಚವಾಗಿ ಬೈದು ತೆರಳಿರುತ್ತಾರೆ.
ಬಳಿಕ ಬಾರ್ ಎದುರಿನ ರಸ್ತೆ ಬದಿಯಲ್ಲಿ ಮನೆಗೆ ಹೊರಡುತ್ತಿದ್ದ ಜಗದೀಶ್ರನ್ನು ಆರೋಪಿತರು ತಡೆದು ನಿಲ್ಲಿಸಿ ಮತ್ತೊಮ್ಮೆ ಹಲ್ಲೆ ನಡೆಸಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 118/2024, ಕಲಂ: 352, 115(2), 126(2), 351(2) ಜೊತೆಗೆ 3(5) ಬಿಎನ್ ಎಸ್ 2023 ರಂತೆ ಪ್ರಕರಣ ದಾಖಲಾಗಿರುತ್ತದೆ.