- Advertisement -
- Advertisement -
ಬೆಂಗಳೂರು: ನಾನು ಕನ್ನಡ ಸಿನಿಮಾರಂಗದಲ್ಲಿ ಕಳೆದ 12 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ.ನಾನು ಏನು ಅನ್ನೋದು ಎಲ್ಲರಿಗೂ ಗೊತ್ತಿದೆ.ಪ್ರಕರಣದಲ್ಲಿ ನಾನು ಮುಗ್ಧೆ ಎಂದು ರಾಗಿಣಿ ದ್ವಿವೇದಿ ಹೇಳಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿರುವ ರಾಗಿಣಿ ಇಂದು ಕೋರ್ಟಿಗೆ ಹಾಜರಾಗಿದ್ದರು.ಈ ವೇಳೆ ಮಾಧ್ಯಮಗಳೊಂದಿಗೆ ಮಾತಾನಾಡಿದ ಅವರು ಕೋರ್ಟ್ ಪ್ರಕ್ರಿಯೆ ಇದ್ದ ಕಾರಣ ಬಂದಿದ್ದೆ.ತನಿಖೆಗೆ ಸಹಕರಿಸುತ್ತೇವೆ.ಸಾಮಾನ್ಯ ವಿಚಾರಣೆಗೆ ಹಾಜರಾಗಿದ್ದೆ.ನನಗೆ ವ್ಯವಸ್ಥೆ ಮೇಲೆ ನಂಬಿಕೆ ಇದೆ.ಬೇರೆಯವರ ಬಗ್ಗೆ ನಾನು ಈಗ ಮಾತಾನಾಡಲ್ಲ ಎಂದರು.
ನಾನು ಮತ್ತು ನನ್ನ ಕುಟುಂಬ ಈ ಪ್ರಕರಣದಿಂದ ನೊಂದಿದ್ದೇವೆ .ನಾನು ತಪ್ಪು ಮಾಡಿಲ್ಲ ಎಂದು ವಿವರಣೆ ಕೊಡುವ ಅಗತ್ಯ ಇಲ್ಲ. ಕನ್ನಡ ಚಿತ್ರೋದ್ಯಮಕ್ಕೆ ಬಂದು 12 ಆಗಿದೆ.ನನಗೆ ಉಸಿರಾಡಲು ಸಮಯ ಕೊಡಿ.ಒಂದಷ್ಟು ವಿಚಾರಗಳನ್ನ ಮುಂದಿನ ದಿನಗಳಲ್ಲಿ ಹೇಳುತ್ತೇನೆ.ನಾನು ಏನು ಅನ್ನೋದು ಎಲ್ಲರಿಗೂ ಗೊತ್ತು.ಈ ಪ್ರಕರಣದಲ್ಲಿ ಏನಾಗಿದೆ ಅಂತ ಎಲ್ಲರಿಗೂ ಗೊತ್ತಿದೆ ಎಂದು ರಾಗಿಣೆ ಹೇಳಿದ್ರು.
- Advertisement -