Friday, April 19, 2024
spot_imgspot_img
spot_imgspot_img

ಆರೋಗ್ಯ ಸಮಸ್ಯೆಯಿಂದಾಗಿ ನಾನು ರಾಜಕೀಯಕ್ಕೆ ಬರಲ್ಲ- ನಟ ರಜನಿಕಾಂತ್

- Advertisement -G L Acharya panikkar
- Advertisement -

ಚೆನ್ನೈ: ಡಿಸೆಂಬರ್ 31 ಕ್ಕೆ ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಿ 2021ರಿಂದ ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಮಾಡುವುದಾಗಿ ತಿಳಿಸಿದ್ದ ನಟ ರಜಿನಿಕಾಂತ್ ತಾವು ರಾಜಕಾರಣ ಪ್ರವೇಶ ಮಾಡುತ್ತಿಲ್ಲ ಎಂದು ಹೇಳಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.ಅನಾರೋಗ್ಯದ ಕಾರಣದಿಂದ ಪಕ್ಷ ಕಟ್ಟಲಾಗುತ್ತಿಲ್ಲ. ಹೊಸ ರಾಜಕೀಯ ಪಕ್ಷದ ಘೋಷಣೆ ಇಲ್ಲ. ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಮಾಡುತ್ತಿಲ್ಲ ಎಂದು ರಜಿನಿಕಾಂತ್ ಹೇಳಿದ್ದಾರೆ. ಈ ಕುರಿತಂತೆ ಮಾಹಿತಿ ನೀಡಿ ಅಭಿಮಾನಿಗಳಿಗೆ ಮೂರು ಪುಟಗಳ ಪತ್ರವನ್ನು ಬರೆದಿದ್ದಾರೆ. ಟ್ವೀಟ್​ ಮಾಡಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ತಮಿಳುನಾಡು ಜನರ ಹಿತದೃಷ್ಠಿಯಿಂದ ನಾನು ಈ ನಿರ್ಧಾರ ಮಾಡುತ್ತಿದ್ದೇನೆ. ರಾಜಕೀಯಕ್ಕಾಗಿ ಜನರಿಗೆ ಸೇವೆ ಮಾಡದೇ, ಜನರಿಗಾಗಿ ಕೆಲಸ ಮಾಡುತ್ತೇನೆ. ನನ್ನನ್ನು ನಂಬಿರುವ ಜನರಿಗೆ ನನ್ನ ಬೆಂಬಲ ಸದಾ ಇರಲಿದೆ. ಕೊರೊನಾ 2.0 ಅಲೆ ಶುರುವಾಗಿದೆ. ನನ್ನ ಸಿನಿಮಾದಲ್ಲಿದ್ದ 14 ಮಂದಿಯಲ್ಲಿ ಮೂವರಿಗೆ ಸೋಂಕು ಕಾಣಿಸಿಕೊಂಡಿತ್ತು. ನಾನು ರಾಜಕೀಯ ಪ್ರವೇಶ ಮಾಡಿದರೆ ಪ್ರಚಾರ ಮಾಡಲು ಸಾವಿರಾರು ಮಂದಿ ಸೇರುತ್ತಾರೆ. ಇದರಿಂದ ಜನರಿಗೆ ಸಮಸ್ಯೆ ಆಗಲಿದೆ. ನನ್ನ ನಿರ್ಧಾರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಲಿದೆ. ಆದರೆ ನನ್ನನ್ನು ಕ್ಷಮಿಸಿ ಎಂದು ರಜಿನಿಕಾಂತ್ ಕೋರಿದ್ದಾರೆ.


- Advertisement -

Related news

error: Content is protected !!