Wednesday, July 2, 2025
spot_imgspot_img
spot_imgspot_img

ಜಿಲ್ಲೆಯಲ್ಲಿ 14 ದಿನಗಳ ಕಾಲ ಲಾಕ್‌ಡೌನ್: ಮಾರ್ಗಸೂಚಿ ಬಿಡುಗಡೆಗೊಳಿಸಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.

- Advertisement -
- Advertisement -

ಮಂಗಳೂರು: ದ.ಕ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತವು ಎಲ್ಲಾ ಅವಶ್ಯಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್-19 ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸುವ ಅಗತ್ಯತೆಯನ್ನು ಮನಗಂಡು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರರವರು ಎಪ್ರಿಲ್ 27ರ ರಾತ್ರಿ 9ಗಂಟೆಯಿಂದ ಮೇ.12ರ ಬೆಳಗ್ಗೆ 6 ಗಂಟೆಯವರೆಗೆ ಅನ್ವಯವಾಗುವಂತೆ ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ.

ಲಾಕ್ಡೌನ್ ಮಾರ್ಗಸೂಚಿಯ ಮಾಹಿತಿ:

  • ಬೆಳಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ.
  • ಕೇವಲ ಕೃಷಿ ಕಟ್ಟಡ ಕಾಮಗಾರಿಗೆ ಮಾತ್ರ ವಿನಾಯಿತಿ ನೀಡಲು ಸರ್ಕಾರ ತೀರ್ಮಾನಿಸಿದೆ.
  • ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ಕರ್ಫ್ಯೂ ಮುಂದುವರಿಕೆ ಮಾಡಲಾಗಿದೆ.
  • ಮದ್ಯದಂಗಡಿಗಳು ಓಪನ್ ಇರಲಿದ್ದು, ಹೋಟೆಲ್ ರೆಸ್ಟೋರೆಂಟ್‌ಗಳಲ್ಲಿ ಪಾರ್ಸಲ್‌ಗೆ ಅವಕಾಶ ನೀಡಲಾಗಿದೆ.
  • ಜನರ ಓಡಾಟಕ್ಕೆ ಕೆಎಸ್‌ಆರ್‌ಟಿಸಿ ಸೇರಿದಂತೆ ಸಾರಿಗೆ ಸಂಚಾರ ಇರುವುದಿಲ್ಲ.
  • ಸರಕು ಸಾಗಣೆ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ.
  • ರೈಲು ಸಾಗಣೆಗೆ ಹಾಗೂ ವಿಮಾನ ಸಂಚಾರಕ್ಕೆ ಅವಕಾಶ.
  • ಇದರ ಪ್ರಯಾಣಿಕರಿಗೆ ಟಿಕೇಟೇ ಪಾಸ್.
  • ಮೆಟ್ರೋ ಸೇವೆಯನ್ನು ಮೊಟುಕುಗೊಳಿಸಲಾಗಿದೆ.
  • ಟ್ಯಾಕ್ಸಿ, ಕ್ಯಾಬ್‌ಗಳನ್ನು ನಿರ್ಬಂಧಿಸಲಾಗಿದೆ. ಆದರೂ ತುರ್ತುಪರಿಸ್ಥಿತಿಯಲ್ಲಿ ಮಾರ್ಗಸೂಚಿಯನ್ವಯ ಅವಕಾಶ ನೀಡಲಾಗಿದೆ.
  • ಶಾಲಾ, ಕಾಲೇಜು, ಕೋಚಿಂಗ್ ಸೆಂಟರ್‌ಗಳು ಎಲ್ಲವೂ ಮುಚ್ಚಲು ಆದೇಶಿಸಲಾಗಿದೆ.
  • ಆನ್‌ಲೈನ್ ಶಿಕ್ಷಣಕ್ಕೆ ಉತ್ತೇಜನ ನೀಡಲು ನಿರ್ಧರಿಸಲಾಗಿದೆ.
  • ಆಹಾರ ವಸ್ತುಗಳ ಡೆಲಿವರಿಗೆ ಅವಕಾಶವಿದೆ.
  • ಸಿನೆಮಾ, ಶಾಪಿಂಗ್ ಮಾಲ್, ಬಾರ್‍ಸ್, ಕ್ಲಬ್ಸ್,ಅಡಿಟೋರಿಯಂ ಮೊದಲಾದವು ಮುಚ್ಚಿರಲಿವೆ.
  • ರಾಜಕೀಯ, ಧಾರ್ಮಿಕ, ಮನೋರಂಜನೀಯಕಾರ್ಯಕ್ರಮ ನಿರ್ಬಂಧಿಸಲಾಗಿದೆ.
  • ಈಗಾಗಲೇ ನಿಗದಿ ಆಗಿರುವ ಧಾರ್ಮಿಕ ಕಾರ್ಯಕ್ರಮಗಳನ್ನುನಿರ್ಬಂಧದ ಅಡಿಯಲ್ಲಿ ಮಾಡಬಹುದು.
  • ಆರೋಗ್ಯ ಸಂಬಂಧಿ ಸೇವೆಗಳು ಲಭ್ಯವಿರಲಿದ್ದು,ಕಂಟೋನ್ಮೆಂಟ್ ವಲಯದಿಂದ ಹೊರಗಿರಬೇಕು.
  • ಕಂಟೋನ್ಮೆಂಟ್ ವಲಯದಿಂದ ಹೊರಗಿರುವ ಎಲ್ಲಾ ಕೃಷಿ ಸಂಬಂಧಿ ಚಟುವಟಿಕೆಗೆ ಅವಕಾಶ ನೀಡಲಾಗಿದೆ.
  • ಮೀನುಗಾರಿಕೆ, ಹೈನುಗಾರಿಕೆ, ಕೋಳಿ ಸಾಕಣೆ, ಮಾಂಸ,ಡೈರಿ ಉತ್ಪನ್ನಗಳಿಗೆ ಅವಕಾಶ ನೀಡಲಾಗಿದೆ.
  • ಮದುವೆಗೆ 50 ಮಂದಿಗೆ ಅವಕಾಶ ನೀಡಿದ್ದು, ಅಂತ್ಯಸಂಸ್ಕಾರಕ್ಕೆ 5 ಮಂದಿಗೆ ಸೀಮಿತಗೊಳಿಸಲಾಗಿದೆ.
  • ಖಾಸಗಿ, ಸರ್ಕಾರಿ ವಾಹನಗಳಿರುವುದಿಲ್ಲ.
  • ಅಂತರ್ ರಾಜ್ಯ ಹಾಗೂ ರಾಜ್ಯದೊಳಗಿನ ಪ್ರಯಾಣಿಕ ವಾಹನಗಳಿಗೆತುರ್ತು ಸಂದರ್ಭ ಮಾತ್ರ ಅವಕಾಶ ನೀಡಲಾಗಿದೆ.
  • ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರವೇ ಪಾಸ್ ಆಗಿರುತ್ತದೆ.
- Advertisement -

Related news

error: Content is protected !!