ವಿಟ್ಲ : ವಿಶ್ವ ಹಿಂದು ಪರಿಷದ್ ಬಜರಂಗದಳ ವಿಟ್ಲ ಪ್ರಖಂಡ ಹಾಗೂ ಶ್ರೀ ರಾಮೋತ್ಸವ ಸಮಿತಿ ವಿಟ್ಲ ಇದರ ಆಶ್ರಯದಲ್ಲಿ ಶ್ರೀ ರಾಮನವಮಿಯ ಪ್ರಯುಕ್ತ ಶ್ರೀ ರಾಮ ಭಜನಾಮೃತ ಹಾಗೂ ರಾವಣ ದಹನ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 01-015-2022ರ ಬೆಳಗ್ಗೆ ಗಂಟೆ 6:00ರಿಂದ ಸಂಜೆ 6:00ರವರೆಗೆ ಭಜನಾ ಕಾರ್ಯಕ್ರಮ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಮಧ್ಯಾಹ್ನ: 3:00 ರಿಂದ 6:00ರವರೆಗೆ ಕುಣಿತ ಭಜನೆ, ಭಜನಾ ಮಂಗಲೋತ್ಸವ ನಡೆಯಲಿದೆ.
ದೀಪ ಪ್ರಜ್ವಲನೆಯನ್ನು ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ, ಶ್ರೀ ಧಾಮ ಮಾಣಿಲ ಹಾಗೂ ಬಂಗಾರು ಅರಸರು, ವಿಟ್ಲ ಅರಮನೆ ನೆರವೇರಿಸಲಿದ್ದಾರೆ. ಸಭಾ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ನಿವೃತ್ತ ಸೈನಿಕ, ಶ್ರೀ ಸದಾಶಿವ ದೇವಸ್ಥಾನ, ಸಾಲೆತ್ತೂರು ಟ್ರಸ್ಟಿಗಳಾದ ಎ. ವಿಠಲ ಶೆಟ್ಟಿ, ಅಗರಿ-ಬಾಳಿಕೆ ವಹಿಸಲಿದ್ದಾರೆ. ಧಾವಿಕ ಉಪನ್ಯಾಸವನ್ನು ವಿಶ್ವ ಹಿಂದು ಪರಿಷದ್ ಪುತ್ತೂರು ಜಿಲ್ಲಾ ಧರ್ಮಪ್ರಸಾರ ಪ್ರಮುಖ್ ಶ್ರೀ ಕೃಷ್ಣ ಉಪಾಧ್ಯಾಯ ಹಾಗೂ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿ ಕೃಷ್ಣ ಹಸಂತಡ್ಕ ನೀಡಲಿದ್ದು, ಶ್ರೀ ರಾಮೋತ್ಸವ ಸಮಿತಿ, ವಿಟ್ಲ ಇದರ ಗೌರವಾಧ್ಯಕ್ಷ ಕೃಷ್ಣಯ್ಯ ಕೆ, ವಿಟ್ಲ ಅರಮನೆ ಹಾಗೂ ವಿಶ್ವ ಹಿಂದು ಪರಿಷದ್, ಪುತ್ತೂರು ಜಿಲ್ಲೆ ಅಧ್ಯಕ್ಷ ಡಾ| ಕೃಷ್ಣ ಪ್ರಸನ್ನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ವಿ.ಸೂ : ಈ ದಿನ(01-015-2022) ಸಂಜೆ ಮಕ್ಕಳು ಶ್ರೀ ರಾಮ ವೇಷಧಾರಿಗಳಾಗಿ ಭಾಗವಹಿಸಲು ಅವಕಾಶವಿದೆ.