Friday, April 19, 2024
spot_imgspot_img
spot_imgspot_img

ಅಯೋಧ್ಯೆಯಲ್ಲಿ ರಾಮಲಲ್ಲಾನಿಗೆ ವಿಶೇಷ ಅಲಂಕಾರ

- Advertisement -G L Acharya panikkar
- Advertisement -

ವರದಿ: ನ್ಯೂಸ್ ಡೆಸ್ಕ್, ವಿ ಟಿವಿ

ಲಕ್ನೋ: ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ಹಿನ್ನಲೆಯಲ್ಲಿ ಅಯೋಧ್ಯೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ರಾಮಲಲ್ಲಾ (ಬಾಲರಾಮ) ನಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಚಿನ್ನಲೇಪದ ವಸ್ತ್ರದಲ್ಲಿ ರಾಮಲಲ್ಲಾ ಕಂಗೊಳಿಸುತ್ತಿದ್ದು, ವಿಶೇಷ ಪೂಜೆ ನಡೆಯುತ್ತಿದೆ.

ಈಗಾಗಲೇ ಪ್ರಧಾನಿ ಮೋದಿ ಅಯೋಧ್ಯೆ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಮಧ್ಯಾಹ್ನ 12.30ಕ್ಕೆ ಭೂಮಿ ಪೂಜೆ ನಡೆಸಲಿದ್ದಾರೆ. ಅದಕ್ಕೂ ಮೊದಲು ರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ.

ಹಸಿರು ಬಣ್ಣದ ಈ ವಸ್ತ್ರಕ್ಕೆ ಕೇಸರಿ ಬಣ್ಣದ ಬಾರ್ಡರ್ ಹಾಕಲಾಗಿದೆ. ನವರತ್ನಗಳನ್ನು ಅಳವಡಿಸಿ ಈ ವಸ್ತ್ರವನ್ನು ಸಿದ್ಧಪಡಿಸಲಾಗಿದೆ. ಭಗವತ್ ಪ್ರಸಾದ್ ಹಾಗೂ ಶಂಕರ್ ಲಾಲ್ ಎಂಬ ಸಹೋದರರ ನೇತೃತ್ವದಲ್ಲಿ ಈ ವಸ್ತ್ರವನ್ನು ಸಿದ್ಧಪಡಿಸಲಾಗಿದೆ. ಸುಮಾರು 4 ತಲೆಮಾರಿನಿಂದ ರಾಮಲಲ್ಲಾನಿಗೆ ಇದೇ ಅಂಗಡಿಯಲ್ಲಿ ವಸ್ತ್ರ ಸಿದ್ಧಪಡಿಸಲಾಗುತ್ತಿದೆ.

- Advertisement -

Related news

error: Content is protected !!