ತಾಲೂಕು ಸಂಯೋಜಕರಾಗಿ ಕೀರ್ತನ್ ಸವಣೂರು ನೇಮಕ





ಪುತ್ತೂರು : ಹಿಂದು ಜಾಗರಣ ವೇದಿಕೆಯ ಪುತ್ತೂರು ತಾಲೂಕಿನ ಕಾರ್ಯಕರ್ತರ ಸಭೆ ಸಂಘದ ಕಾರ್ಯಾಲಯ ಪಂಚವಟಿಯಲ್ಲಿ ನಡೆಯಿತು. ಸಭೆಯಲ್ಲಿ ತಾಲೂಕು ಪದಾಧಿಕಾರಿಗಳನ್ನು ನಿಯುಕ್ತಿಗೊಳಿಸಲಾಯಿತು ಎಂದು ಜಿಲ್ಲಾ ಸಂಯೋಜಕ ಮೋಹನ್ ದಾಸ್ ಕಾಣಿಯೂರುರವರು ತಿಳಿಸಿದ್ದಾರೆ.
ತಾಲೂಕು ಸಂಯೋಜಕರಾಗಿ ಕೀರ್ತನ್ ಸವಣೂರು, ಸಹ ಸಂಯೋಜಕರಾಗಿ ಶಿವಪ್ರಸಾದ್ ಶಾಂತಿಗೋಡು, ಅನಂತ್ ಈಶ್ವರಮಂಗಲ, ತಾಲೂಕು ಕಾರ್ಯಕಾರಿಣಿ ಸದಸ್ಯರುಗಳಾಗಿ ಮನೀಶ್ ಬಿರ್ವ, ಜಯಪ್ರಕಾಶ್ ಮುಂಡೂರು, ಲೋಕನಾಥ ಭಂಡಾರಿ, ತೇಜಸ್ ಸವಣೂರು, ದಯಾನಂದ ಚಾರ್ವಾಕ, ಶ್ರೀಧರ ಇದ್ಯಾಡಿ, ಭವಿತ್ ಕುರಿಯ, ಸುಭಾಷ್ ಮುಕ್ವೆ, ಮನೋಜ್ ಕಾಣಿಯೂರು, ದೀಪಕ್ ಮುಂಡ್ಯ, ಜಗನ್ನಾಥ ಅನಿಲೆ, ಶ್ರೀಕಾಂತ್ ಬೆಳ್ಳಿಪ್ಪಾಡಿ, ಪ್ರಸಾದ್ ಪುರುಷರಕಟ್ಟೆ, ಕಿರಣ್ ಬೆದ್ರಾಳ, ಶೇಖರ್ ಬನ್ನೂರ್, ಗೀತೆಶ್ ಅನಿಲೆ, ರಮೇಶ್ ಮುಂಡೂರು, ಚೈತ್ರೆಶ್ ಪುರುಷರಕಟ್ಟೆ, ಮೋಹನ್ ಆರ್ಲಪದವು, ಕೀರ್ತಿಶ್ ಮುಕ್ವೆ, ಧೀರಜ್, ಟಿ, ಚೆನ್ನಪ್ಪ, ಸಂತೋಷ್ ಬಿ ಕೆ, ಸಂದೀಪ್ ಮುಂಡೂರು, ಕಮಲಾಕ್ಷ ಕೆ, ಮನೋಜ್ ಕುಮಾರ್, ಸುಧೀಂದ್ರ, ಹೇಮಂತ್, ದೀಪಕ್, ಭವಿತ್, ಕೌಶಿಕ್, ತೇಜಸ್ ಮನೋಜ್ ಕುಮಾರ್ರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕರ್ತರ ಸಭೆಯಲ್ಲಿ ಪ್ರಾಂತದ ಪ್ರಮುಖರಾದ ಪ್ರಶಾಂತ್ ಬಂದ್ಯೋಡು, ರವಿರಾಜ್ ಶೆಟ್ಟಿ ಕಡಬ, ಹರೀಶ್ ಮಂಗಳೂರು, ಪ್ರಶಾಂತ್ ಬಂಟ್ವಾಳ, ಜಿಲ್ಲಾ ಪ್ರಮುಖರಾದ ದಿನೇಶ್ ಪಂಜಿಗ, ಭರತ್ ಈಶ್ವರಮಂಗಲ, ಅನುಪ್ ಆಳ್ವ ಸೇರಿದಂತೆ ಪುತ್ತೂರು ತಾಲೂಕಿನ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.