Wednesday, May 15, 2024
spot_imgspot_img
spot_imgspot_img

ಮೊದಲು ಕಾಶ್ಮೀರ ವಶ ಬಳಿಕ ಎಲ್ಲ ಕಡೆಯಿಂದ ಭಾರತದ ಮೇಲೆ ದಾಳಿ !-ಶೋಯಿಬ್ ಅಖ್ತರ್

- Advertisement -G L Acharya panikkar
- Advertisement -

ಮೊದಲು ನಾವು ಕಾಶ್ಮೀರವನ್ನು ವಶಪಡಿಸಿಕೊಳ್ಳುತ್ತೇವೆ. ಬಳಿಕ ಭಾರತದ ಮೇಲೆ ಘಜ್ವಾ ಎ ಹಿಂದ್’ಗಾಗಿ ಎಲ್ಲ ಕಡೆಯಿಂದ ದಾಳಿ ಮಾಡುತ್ತೇವೆ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಿಬ್ ಅಖ್ತರ್ ಹೇಳಿದ್ದಾರೆ.

ಅಖ್ತರ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾ ಟಿವಿ ಸಂದರ್ಶನದಲ್ಲಿ ಅಖ್ತರ್ ಈ ಹೇಳಿಕೆ ನೀಡಿದ್ದಾರೆ. ಅಖ್ತರ್ ಭಾರತದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಮೊದಲ ಕ್ರಿಕೆಟಿಗ ಅಲ್ಲ. ಇದಕ್ಕೂ ಮೊದಲು ಶಾಹಿದ್ ಅಫ್ರಿದಿ ಮತ್ತು ಜಾವೇದ್ ಮಿಯಾಂದ್’ರಂತಹ ಕ್ರಿಕೆಟಿಗರು ಭಾರತದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಾಮಾ ಟಿವಿ ಸಂದರ್ಶನದಲ್ಲಿ ಶೋಯಿಬ್ ‘ಗಜ್ವಾ-ಎ-ಹಿಂದ್’ ಬಗ್ಗೆ ಮಾತನಾಡುತ್ತಿರುವ ದೃಶ್ಯವಿದೆ. ಗಜ್ವಾ-ಎ-ಹಿಂದ್ ಎಂದರೆ ‘ಭಾರತದ ವಿರುದ್ಧ ಧರ್ಮ ಯುದ್ಧ’ ಎಂದರ್ಥ. ‘ನಮ್ಮ ಧರ್ಮಗ್ರಂಥಗಳಲ್ಲಿ ಘಜ್ವಾ-ಎ-ಹಿಂದ್ ನಡೆಯುತ್ತದೆ ಮತ್ತು ಅಟೊಕ್ ನದಿಯು ಕೆಂಪು ಬಣ್ಣದಲ್ಲಿ ಇರುತ್ತದೆ ಎಂದು ಎರಡು ಬಾರಿ ಬರೆಯಲಾಗಿದೆ.

ಅಫ್ಘಾನಿಸ್ತಾನದಿಂದ ಪಡೆಗಳು ಅಟೊಕ್ ವರೆಗೆ ತಲುಪುತ್ತವೆ. ಶಾಮಲ್ ಮಶ್ರಿಕ್ ನಿಂದ ಆ ಪಡೆಗಳು ಉದಯಿಸಿದ ನಂತರ, ಉಜ್ಬೇಕಿಸ್ತಾನದಿಂದ ವಿವಿಧ ತುಕಡಿಗಳು ಬರುತ್ತವೆ. ಇವೆಲ್ಲವೂ ಲಾಹೋರ್’ನ ಐತಿಹಾಸಿಕ ಪ್ರದೇಶವಾದ ಖೋರಾಸನ್ ಅನ್ನು ಉಲ್ಲೇಖಿಸುತ್ತವೆ’ ಎಂದು ಅಖ್ತರ್ ಸಂದರ್ಶನದಲ್ಲಿ ಹೇಳಿದ್ದಾರೆ.

- Advertisement -

Related news

error: Content is protected !!