Sunday, June 29, 2025
spot_imgspot_img
spot_imgspot_img

ಪುತ್ತೂರು: ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ದೇವಸ್ಥಾನ ಬೆಳ್ಳಿಪ್ಪಾಡಿಯಲ್ಲಿ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ, ಹಸಿರು ಹೊರೆಕಾಣಿಕೆ ಸಮರ್ಪಣೆ, ಉಗ್ರಾಣ ಮುಹೂರ್ತ

- Advertisement -
- Advertisement -

ಪುತ್ತೂರು: ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ದೇವಸ್ಥಾನ ಬೆಳ್ಳಿಪ್ಪಾಡಿಯಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನವೀಕರಣ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವವು ಎ 29 ರಿಂದ ಮೇ 07ರವರೆಗೆ ನಡೆಯಲಿದೆ .

ಈ ಪ್ರಯುಕ್ತ ಎ.29ರಂದು ಬೆಳಿಗ್ಗೆ9.30ಕ್ಕೆ ಸಾಮೂಹಿಕ ಪ್ರಾರ್ಥನೆ ನಡೆದ ನಂತರ ಊರ ಹಾಗೂ ಪರ ಊರ ಭಕ್ತರಿಂದ ಹಸಿರು ಹೊರೆಕಾಣಿಕೆ ಸಮರ್ಪಣೆಯ ಬಳಿಕ ಉಗ್ರಾಣ ಮುಹೂರ್ತ ನೆರವೇರಿತು.

ಉಗ್ರಾಣ ಕೊಠಡಿ ಉದ್ಘಾಟನೆಯನ್ನು ಬೆಳ್ಳಿಪ್ಪಾಡಿ ವಿಶ್ವನಾಥ ರೈ, ಕಾರ್ಯಲಯ ಕೊಠಡಿ ಉದ್ಘಾಟನೆ ಕೆ.ಪಿ. ಗೌಡ ಕೂಟೇಲು, ಹೊರೆಕಾಣಿಕೆ ಉದ್ಘಾಟನೆ ಸಹಸ್ರಲಿಂಗೇಶ್ವರ ದೇವಸ್ಥಾನ ಉಪ್ಪಿನಂಗಡಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಕರುಣಾಕರ ಸುವರ್ಣ, ಪಾಕಶಾಲೆ ಉದ್ಘಾಟನೆಯನ್ನು ಮಹಾವಿಷ್ಣು ದೇವಸ್ಥಾನ ಶಾಂತಿನಗರ ಆಡಳಿತ ಮೊಕೇಸ್ತರರು ಯು.ಜಿ. ರಾಧಾ, ನೆರವೇರಿಸಿದರು.

- Advertisement -

Related news

error: Content is protected !!