Tuesday, May 7, 2024
spot_imgspot_img
spot_imgspot_img

ಬೆಳ್ತಂಗಡಿ : ತಂದೆ-ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು,ಜೀವ ಬೆದರಿಕೆಯೊಡ್ಡಿದ ಮಗ : ಪ್ರಕರಣ ದಾಖಲು

- Advertisement -G L Acharya panikkar
- Advertisement -

ಬೆಳ್ತಂಗಡಿ : ಮಗನು ತಂದೆ-ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು,ಜೀವ ಬೆದರಿಕೆಯೊಡ್ಡಿದ ಘಟನೆ ಬೆಳ್ತಂಗಡಿಯ ಬಡಗಕಾರಂದೂರು ಗ್ರಾಮದಲ್ಲಿ ನಡೆದಿದೆ.

ಬಡಗಕಾರಂದೂರು ಗ್ರಾಮ, ಬೆಳ್ತಂಗಡಿ ನಿವಾಸಿ ಸಿಸಿಲಾ ವೇಗಸ್ ಪ್ರಾಯ(79) ಎಂಬವರಮಗ ದಿನಾಂಕ: 15.03.2024 ರಂದು ಬೆಳಿಗ್ಗೆ, ಸಿಸಿಲಾ ವೇಗಸ್‌ ರ ಮಗ ಆರೋಪಿಯಾದ ಸವೇರ ಪಿರೇರನು ದೊಣ್ಣೆ ಹಿಡಿದು ಮನೆ ಗೇಟಿನ ಹೊರಗಡೆ ನಿಂತು ಕೊಂಡಿದ್ದು, ಆತನ ಹೆಂಡತಿ ಮತ್ತೋರ್ವ ಆರೋಪಿತೆ ಶಾಂತಿ ಗ್ರೇಟಾ ಪಿರೇರಾಳು ಕಲ್ಲನ್ನು ಹಿಡಿದುಕೊಂಡು, ಸಿಸಿಲಾ ವೇಗಸ್‌ ರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ಬೈದಿರುವುದಲ್ಲದೇ ಕಲ್ಲಿನಿಂದ ಹೊಡೆಯಲು ಯತ್ನಿಸಿ ಜೀವಬೆದರಿಕೆ ಒಡ್ಡಿರುತ್ತಾರೆ.

ಪ್ರಕರಣ ಮುಂದುವರಿದಂತೆ, ದಿನಾಂಕ:26.03.2024 ರಂದು ಬೆಳಿಗ್ಗೆ ಕೂಡ ಸಿಸಿಲಾ ವೇಗಸ್‌ ರ ಮಗ ಸವೇರ ಪಿರೇರನು ಮನೆಯ ಬೇಲಿಯ ಸುತ್ತಲು ತಿರುಗಾಡುತ್ತಿದ್ದು, ಇದರಿಂದ ಸಿಸಿಲಾ ವೇಗಸ್‌ ಹಾಗೂ ಅವರ ಗಂಡನಿಗೂ ಪ್ರಾಣ ಭಯ ಉಂಟಾಗಿರುತ್ತದೆ, ಘಟನೆ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅಕ್ರ 29/2024 ಕಲಂ: 447, 506, 504 ಜೊತೆಗೆ 34 ಐ.ಪಿ.ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ

- Advertisement -

Related news

error: Content is protected !!