- Advertisement -
- Advertisement -



ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪಾಲಕೊಲ್ಲುವಿನ ಜಾಹ್ನವಿ ದಂಗೆಟಿ 2029ಕ್ಕೆ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಎಲೆಕ್ಟ್ರಾನಿಕ್ಸ್&ಸಂವಹನ ಎಂಜಿನಿಯರಿಂಗ್ನಲ್ಲಿ ಪದವೀಧರರಾಗಿರುವ ಜಾಹ್ನವಿ, ನಾಸಾದ ಪ್ರತಿಷ್ಠಿತ ಅಂತರರಾಷ್ಟ್ರೀಯ ವಾಯು&ಬಾಹ್ಯಾಕಾಶ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮುಂದಿನ 4 ವರ್ಷಗಳಲ್ಲಿ ಉದ್ಘಾಟನೆಗೊಳ್ಳಲಿರುವ ಅಮೆರಿಕ ಮೂಲದ ಯೋಜನೆಯಾದ ಟೈಟಾನ್ಸ್ ಆರ್ಬಿಟಲ್ ಪೋರ್ಟ್ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಲು ಜಾಹ್ನವಿಯನ್ನು ಆಯ್ಕೆ ಮಾಡಲಾಗಿದೆ.
- Advertisement -