- Advertisement -
- Advertisement -
ನವದೆಹಲಿ: ರಾಮಮಂದಿರದ ಅಡಿಪಾಯದ ಸ್ಥಳದಲ್ಲಿ ನದಿಯ ಸೆಲೆ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಮ ಮಂದಿರ ಟ್ರಸ್ಟ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಳಿ ದೇವಾಲಯದ ಬಲಿಷ್ಠ ಅಡಿಪಾಯ ನಿರ್ಮಾಣಕ್ಕೆ ಸೂಕ್ತ ಮಾಡೆಲ್ ತಿಳಿಸುವಂತೆ ಮನವಿ ಮಾಡಿದ್ದಾರೆ.
ಸರಯೂ ನದಿಯ ನೀರಿನ ಸೆಲೆ ರಾಮ ಮಂದಿರ ಅಡಿಪಾಯ ನಿರ್ಮಾಣದ ಸ್ಥಳದಲ್ಲಿ ಪತ್ತೆಯಾಗಿದೆ. ಪ್ರಧಾನಮಂತ್ರಿಗಳ ಮಾಜಿ ಪ್ರಿನ್ಸಿಪಲ್ ಸೆಕ್ರೆಟರಿ ನೃಪೇಂದ್ರ ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ದೇವಾಲಯದ ನಿರ್ಮಾಣ ಸಮಿತಿ ಈ ಕುರಿತು ಮಂಗಳವಾರ ಚರ್ಚೆ ನಡೆಸಿದೆ. ಸರಯೂ ನದಿಯ ಸೆಲೆ ದೇವಾಲಯದ ಕೆಳಭಾಗದಲ್ಲಿ ಹರಿಯುತ್ತಿರುವುದರಿಂದ ಈಗ ಸಿದ್ಧಪಡಿಸಿರುವ ಮಾಡೆಲ್ನಲ್ಲಿ ದೇವಾಲಯದ ನಿರ್ಮಾಣ ಕಾರ್ಯಸಾಧ್ಯವಲ್ಲ ಎಂದು ತಿಳಿದುಬಂದಿದೆ.
- Advertisement -