Sunday, June 29, 2025
spot_imgspot_img
spot_imgspot_img

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಅಬ್ಬರ: ಬೋಟ್‌ ಮಗುಚಿ 9 ಮೀನುಗಾರರು ಮೃತ್ಯು..!

- Advertisement -
- Advertisement -

ಕೋಲ್ಕತ್ತ: ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಮೀನುಗಾರಿಕಾ ಬೋಟ್ ಮಗುಚಿದ್ದು, 9 ಮೀನುಗಾರರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಮೀನುಗಾರಿಕೆ ಸಲುವಾಗಿ ಪಶ್ಚಿಮ ಬಂಗಾಳದ ಸುಂದರಬನ್‌ನಿಂದ ಬುಧವಾರ ತೆರಳಿದ್ದ ಬೋಟ್‌ನಲ್ಲಿ 17 ಮಂದಿ ಇದ್ದರು ಎಂದು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸುರಜಿತ್ ಬಾಗ್ ತಿಳಿಸಿದ್ದಾರೆ.

ಬಘೆರ್ ಚಾರ್ ದ್ವೀಪದ ಬಳಿ ಚಂಡಮಾರುತ ಅಪ್ಪಳಿಸಿದೆ. ಆ ವೇಳೆ ಎಂಟು ಮಂದಿ ಬೋಟ್‌ ಡೆಕ್ನಲ್ಲಿದ್ದರು. ಉಳಿದವರು ಕ್ಯಾಬಿನ್‌ನಲ್ಲಿ ಮಲಗಿದ್ದರು ಎಂದು ಹೇಳಿದ್ದಾರೆ.

‘ಎತ್ತರದ ಅಲೆಗಳು ಅಪ್ಪಳಿಸಿದ್ದರಿಂದ ಬೋಟ್, ಮಗುಚಿದೆ. ಡೆಕ್ನಲ್ಲಿದ್ದ ಎಂಟು ಮಂದಿಯನ್ನು ಮತ್ತೊಂದು ಬೋಟ್‌ನಿಂದ ರಕ್ಷಿಸಲಾಗಿದೆ. ಶೋಧದ ಕಾರ್ಯ ನಡೆಯುತ್ತಿದ್ದು,ಮಲಗಿದ್ದ 9 ಮೀನುಗಾರರು ಪತ್ತೆಯಾಗಿಲ್ಲ. ಅವರೆಲ್ಲ ಮೃತಪಟ್ಟಿರುವ ಆತಂಕ ಎದುರಾಗಿದೆ ಎನ್ನಲಾಗುತ್ತಿದೆ.

- Advertisement -

Related news

error: Content is protected !!