- Advertisement -
- Advertisement -
ಬೆಂಗಳೂರು: ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಪುತ್ತೂರು ಮೂಲದ ಸುಹಾನಾ ಇಂದು ಮೃತಪಟ್ಟಿದ್ದಾರೆ.
ಸುಹಾನಾ ಗಂಭೀರ ಶ್ವಾಸಕೋಶ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ವಿಶೇಷ ಝೀರೋ ಟ್ರಾಫಿಕ್ ಆಂಬ್ಯುಲೆನ್ಸ್ ಮೂಲಕ ಪುತ್ತೂರಿನ ಮಹಾವೀರ ಆಸ್ಪತ್ರೆಯಿಂದ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಾರುಣ್ಯ ನಿಧಿ ಕರ್ನಾಟಕ ಚಾರಿಟೇಬಲ್ ಟ್ರಸ್ಟ್ (ರಿ) ಸುಹಾನಾಳ ಚಿಕಿತ್ಸೆಯ ಜವಾಬ್ಧಾರಿಯನ್ನು ಕೂಡ ತೆಗೆದುಕೊಂಡಿತ್ತು. ಸುಹಾನಳಿಗೆ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ಕಾಲಾವಕಾಶವನ್ನು ಕೂಡ ನೀಡಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
- Advertisement -