- Advertisement -
- Advertisement -
ಆಗ್ರಾ: ದಸರಾ ಹಬ್ಬದ ದಿನದಂದೇ ಆಗ್ರಾದ ತಾಜ್ಮಹಲ್ನಲ್ಲಿ ಕೇಸರಿ ಧ್ವಜ ಹಾರಿಸುವುದರ ಜೊತೆಗೆ ಶಿವ ಸ್ತೋತ್ರವನ್ನ ಪಠಿಸಲಾಗಿದೆ. ಈ ಘಟನೆ ಇದೀಗ ಸಾಕಷ್ಟು ಸುದ್ದಿ ಮಾಡಿದ್ದು ಕೋಲಾಹಲ ಮೂಡಿಸಿದೆ. ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿ ಹಾಗೂ ಕಾರ್ಯಕರ್ತರು ತಾಜ್ಮಹಲ್ ಪ್ರೇಮ ಸ್ಮಾರಕದಲ್ಲಿ ಕೇಸರಿ ಧ್ವಜವನ್ನ ಹಾರಿಸಿದ್ದಾರೆ. ಅಲ್ಲದೆ ಇದೆ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಪದಾಧಿಕಾರಿ ಗೌರವ್ ಠಾಕೂರ್ ತಾಜ್ ಸಂಕೀರ್ಣದ ಒಳಗೆ ಶಿವ ಸ್ತೋತ್ರ ಪಠಿಸಿದ್ದಾರೆ.

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಗೌರವ್ ಠಾಕೂರ್, ನಮ್ಮ ಸಂಘಟನೆ ತಾಜ್ಮಹಲ್ನ್ನು ಶಿವನ ದೇವಾಲಯ ಎಂದು ನಂಬಿದೆ. ಶಿವನ ಮಂದಿರವನ್ನ ನೆಲಸಮ ಮಾಡಿದ ಮೊಘಲ್ ಚಕ್ರವರ್ತಿ ಶಹಜಹಾನ್ ಇದನ್ನ ಸ್ಮಾರಕ ಮಾಡಿದ್ದಾನೆ. ಹೀಗಾಗಿ ನಾವಿಲ್ಲಿ ಶಿವ ಸ್ತೋತ್ರ ಪಠಿಸಿದ್ದೇವೆ ಎಂದಿದ್ದಾರೆ. ಕೇಸರಿ ಧ್ವಜ ಹಾರಿಸಿದ ಯುವಕರನ್ನ ಸಿಐಎಸ್ಎಫ್ ಪಡೆ ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ.

- Advertisement -