

ಕಾರ್ಕಳ : ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದ ದನ ಕಳ್ಳತನ ಪ್ರಕರಣದ ಆರೋಪಿ ಕುಕ್ಕುಂದೂರು ಜಯಂತಿ ನಗರ ನಾಲ್ಕನೇ ಕ್ರಾಸ್ನ ನಿವಾಸಿ ಮೊಹಮ್ಮದ್ ರಫೀಕ್ (33) ಎಂಬಾತನನ್ನು ಕಾರ್ಕಳ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
2021ರಲ್ಲಿ ವಿದೇಶಕ್ಕೆ ಪಲಾಯನ ಮಾಡಿದ್ದ ರಫೀಕ್ ವಿರುದ್ಧ ನ್ಯಾಯಾಲಯ ಬಂಧನ ವಾರಂಟ್ ಜಾರಿ ಮಾಡಿತ್ತು. ಇತ್ತೀಚೆಗೆ ಈತ
ವಿದೇಶದಿಂದ ಬಂದಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸ್ ನಿರೀಕ್ಷಕ ನಾಗೇಶ್ ಕೆ. ಹಾಗೂ ಉಪನಿರೀಕ್ಷಕ
ಧನಂಜಯ್ ಮತ್ತು ಲೋಲಾಕ್ಷ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ನಗರ ಠಾಣೆ ಸಿಬ್ಬಂದಿ ರಮೇಶ್ ಹಾಗೂ ವಿಶ್ವಜಿತ್ ಬ್ರಹ್ಮಾವರ
ಪೊಲೀಸರ ಸಹಾಯದೊಂದಿಗೆ ಬ್ರಹ್ಮಾವರ ಬೈಕಾಡಿಯಿಂದ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ 14
ದಿನಗಳವರೆಗೆ ನ್ಯಾಯಾಂಗ ಬಂಧಿನ ವಿಧಿಸಿದೆ.
ರಫೀಕ್ ವಿರುದ್ಧ ಹೆಬ್ರಿ ಠಾಣೆಯಲ್ಲಿ 1, ಬಜ್ಪೆ ಠಾಣೆಯಲ್ಲಿ 2 ದನ ಕಳ್ಳತನ ಪ್ರಕರಣ ಹಾಗೂ ಚಿಕ್ಕಮಗಳೂರಿನ ಲಿಂಗದಹಳ್ಳಿ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.