Saturday, June 28, 2025
spot_imgspot_img
spot_imgspot_img

ಮಂಗಳೂರು: ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ಬೈಕ್‌; ಸಹಸವಾರ ಮೃತ್ಯು..!!

- Advertisement -
- Advertisement -

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 73ರ ಮಂಗಳೂರಿನ ನಂತೂರು-ಪಡೀಲ್ ನಡುವಿನ ನಿಡ್ಡೇಲ್ ಕ್ರಾಸ್ ಬಳಿ ಬೈಕೊಂದು ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದು ಸಹಸವಾರ ಮೃತ ಪಟ್ಟ ಘಟನೆ ನಡೆದಿದೆ.

ಮೃತ ಯುವಕ ಫರಂಗಿಪೇಟೆ ನಿವಾಸಿ ಕೀರ್ತಿಕ್ (21) ಎಂದು ತಿಳಿದು ಬಂದಿದೆ.

ಸುಶೀಲ್ ಎಂಬವರು ಬೆಳಗಿನ ಜಾವ ಬೈಕ್ ನಲ್ಲಿ ಕೀರ್ತಿಕ್ ಅವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ನಂತೂರು ಕಡೆಯಿಂದ ಪಡೀಲ್ ಕಡೆಗೆ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ನಿಡ್ಡೇಲ್ ಕ್ರಾಸ್ ಬಳಿ ತಲುಪುತ್ತಿದ್ದಂತೆ ಬೈಕ್‌ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದಿದೆ ಎಂದು ತಿಳಿದು ಬಂದಿದೆ.

ಈ ಸಂದರ್ಭ ಸಹ ಸವಾರನಾಗಿದ್ದ ಕೀರ್ತಿಕ್ ತೀವ್ರ ಗಾಯಗೊಂಡಿದ್ದಾರೆ. ಸುಶೀತ್ ಅವರು ತನ್ನ ಸ್ನೇಹಿತ ನಿತೇಶ್ ಕುಮಾರ್ ಗೆ ವಿಷಯ ತಿಳಿಸಿದ್ದು, ನಿಶೇಶ್ ಅವರು ಬಂದು ಸ್ಥಳೀಯ ಜನರ ಸಹಕಾರದೊಂದಿಗೆ ಕೀರ್ತಿಕ್ ನನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಮಂಗಳೂರಿನ ಸಂಚಾರ ಪೂರ್ವ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!