Monday, June 30, 2025
spot_imgspot_img
spot_imgspot_img

ಪದೇ ಪದೇ ಕೀಟಲೆ ಮಾಡಿ ಕಿಚಾಯಿಸುತ್ತಿದ್ದ ಗೆಳೆಯನನ್ನೇ ಕೊಂದ ಯುವಕರು..!

- Advertisement -
- Advertisement -

ಪದೇ ಪದೇ ಕೀಟಲೆ ಮಾಡಿ ಕಿಚಾಯಿಸುತ್ತಿದ್ದ ಎಂದು ಗೆಳೆಯನನ್ನೇ ಯುವಕರು ಕೊಂದು ಹಾಕಿದ ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜಾರ್ಖಂಡ್ ಮೂಲದ ಲಕ್ಷಣ್ ಮಾಂಜಿ ಕೊಲೆಯಾದ ವ್ಯಕ್ತಿ. ಈತ ಇತ್ತೀಚೆಗೆ ಕೂಲಿ ಕೆಲಸ ಅರಿಸಿ ಗೆಳೆಯರೊಂದಿಗೆ ಬೆಂಗಳೂರಿಗೆ ಬಂದಿದ್ದ. ಗೆಳೆಯರೊಂದಿಗೆ ಬೆಂಗಳೂರಲ್ಲಿ ವಾಸವಿದ್ದ ಮೃತ ಲಕ್ಷ್ಮಣ್, ನವೆಂಬರ್ 16ರ ರಾತ್ರಿ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡಿದ್ದಾರೆ. ಪಾರ್ಟಿ ವೇಳೆ ಶುರುವಾದ ಗೆಳೆಯರ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಯುವಕನ ಶವ ಪತ್ತೆಯಾದ 24 ಗಂಟೆಗಳಲ್ಲೇ ಕೊತ್ತನೂರು ಪೊಲೀಸರು ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯ ಸಂಬಂಧ ಜಗದೇವ್ ಹಾಗೂ ಚಂದನ್ ಕುಮಾರ್ ಎಂಬುವವರನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.

ಲಕ್ಷ್ಮಣ್‌ ಮಾಂಜಿ ಜಾರ್ಖಂಡ್‌ನಲ್ಲಿದ್ದಾಗಿನಿಂದಲೂ ಎಲ್ಲರ ಕಾಲೆಳೆದು ಮಾತನಾಡುತ್ತಿದ್ದನಂತೆ. ಕುಡಿದ ಮೇಲೂ ಸಹ ಅದೇ ರೀತಿ ಮಾತಾಡಿದಾಗ ಹೊರಗೆ ಕರೆ ತಂದು ಸ್ನೇಹಿತರೆ ಕೊಲೆ ಮಾಡಿದ್ದಾರೆ. ಬೈರತಿಯ ಕ್ಯಾಲಸನಹಳ್ಳಿಯ ಖಾಲಿ ಜಮೀನಿಗೆ ಕರೆತಂದು ಹಾಲೋ ಬ್ಲಾಕ್ ಅನ್ನು ತಲೆಯ ಮೇಲೆ ಹಾಕಿ ಜಜ್ಜಿ ಕೊಲೆ ಮಾಡಿದ್ದಾರೆ. ಕೃತ್ಯಕ್ಕೆ ಸಂಬಂಧಿಸಿ ಜಗದೇವ್ ಹಾಗೂ ಚಂದನ್ ಕುಮಾರ್ ಎಂಬವರನ್ನು ಬಂಧಿಸಲಾಗಿದೆ. ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!