Saturday, June 28, 2025
spot_imgspot_img
spot_imgspot_img

ಪಂಪ್ ರಿಪೇರಿಗೆ ಬಾವಿಗಿಳಿದ ಮೂವರು ಸಾವು

- Advertisement -
- Advertisement -

ಕಾರವಾರ: ಪಂಪ್ ರಿಪೇರಿಗೆ ಬಾವಿಗೆ ಬಿದ್ದು ಮೂರು ಜನರ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನಕಟ್ಟ ಗ್ರಾಮದಲ್ಲಿ ನಡೆದಿದೆ. ಬಾವಿಯಲ್ಲಿ ಬಿದ್ದು ಹೋಗಿದ್ದ ಪಂಪ್ ಸೆಟ್ ತೆಗೆಯಲು ಬಾವಿಗೆ ಇಳಿದಿದ್ದ ವ್ಯಕ್ತಿ ಮೇಲಕ್ಕೆ ಬರದ ಕಾರಣ ರಕ್ಷಣೆಗೆ ಇಳಿದಿದ್ದ ಇಬ್ಬರು ಸೇರಿ ಮೂವರು ಬಾವಿಯಲ್ಲಿ ಮುಳಿಗೆ ಸಾವು ಕಂಡಿದ್ದಾರೆ. ಗೋವಿಂದ ಸೋಮಯ್ಯ ಪೂಜಾರಿ, ಗಣೇಶ್ ರಾಮದಾಸ್ ಶೇಟ್, ಸುರೇಶ್ ನಾಯರ್ ಮೃತ ದುರ್ದೈವಿಗಳು. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾವಿಯ ಪಂಪ್ ಹಾಳಾಗಿದ್ದ ಕಾರಣ ದುರಸ್ಥಿ ಸಲುವಾಗಿ ಗೋವಿಂದ್ ಸೋಮಯ್ಯ ಪೂಜಾರಿ ಬಾಗಿಗೆ ಇಳಿದರು. ಆದರೆ ಮೇಲೆ ಬಾರದೆ ಇದ್ದಾಗ ಆತಂಕಗೊoಡ ಗಣೇಶ್ ಶೇಟ್ ರಕ್ಷಣೆಗೆ ತೆರಳಿದ್ದಾನೆ. ಇದೇ ವೇಳೆ ಅಲ್ಲಿ ಕೂಗಾಟ ಕೇಳಿದ್ದು, ಮೇಲಿದ್ದ ಸುರೇಶ್ ನಾಯರ್ ಕೂಡಾ ಬಾಗಿಗೆ ಇಳಿದಿದ್ದು, ಮೂವರು ಮೃತಪಟ್ಟಿದ್ದಾರೆ. ಮಾಹಿತಿಯ ಪ್ರಕಾರ ಬಾವಿಯು ಕಿರುದಾಗಿದ್ದು, ಆಮ್ಲಜನಕ ಕೊರತೆಯ ಕಾರಣದಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

- Advertisement -

Related news

error: Content is protected !!