- Advertisement -
- Advertisement -
ತಿರುಪತಿ: ತಿರುಮಲದ ಪ್ರಸಿದ್ಧ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕ ನವರಾತ್ರಿ ಬ್ರಹ್ಮೋತ್ಸವವು ಅ. 16ರಿಂದ ಆರಂಭವಾಗಲಿದ್ದು, ಈ ಬಾರಿ ಭಕ್ತರು ಮತ್ತು ಮೆರವಣಿಗೆ ಇಲ್ಲದೆಯೇ ಬ್ರಹ್ಮೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಅಧಿಕಾರಿ ತಿಳಿಸಿದ್ದಾರೆ.
ಟಿಟಿಡಿಯ ನೂತನ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್. ಜವಾಹರ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಕೋವಿಡ್–19 ಕಾರಣಕ್ಕಾಗಿ ಮೆರವಣಿಗೆ ಮತ್ತು ಭಕ್ತರಿಗೆ. ಅವಕಾಶ ಇಲ್ಲದೆಯೇ ಒಂಬತ್ತು ದಿನಗಳ ಕಾಲ ಬ್ರಹ್ಮೋತ್ಸವವನ್ನು ನಡೆಸಲು ನಿರ್ಧಾರ ಕೈಗೊಳ್ಳಲಾಯಿತು. ಅರ್ಚಕರು ಮತ್ತು ಹಿರಿಯ ಅಧಿಕಾರಿಗಳಿಗೆ ಮಾತ್ರ ಕೋವಿಡ್ ಪರೀಕ್ಷೆಯ ನಂತರ ವಿಧಿವಿಧಾನಗಳ ನೇರವೇರಿಕೆಗೆ ಅವಕಾಶ ನೀಡಲಾಗಿದೆ.
- Advertisement -