- Advertisement -
- Advertisement -


ಮಂಗಳೂರು: ಗೋ ಮಾಂಸ ಸಾಗಿಸುತ್ತಿದ್ದ ವಾಹನದ ಮೇಲೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿರುವ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ.
ಮಂಗಳೂರಿನ ಉರ್ವ ಸ್ಟೋರ್ ಬಳಿ ತಡರಾತ್ರಿ ಜೋಕಟ್ಟೆಯಿಂದ ಮಂಗಳೂರು ನಗರದ ಬೀಫ್ ಸ್ಟಾಲ್ ಗಳಿಗೆ ಸರಬರಾಜು ಮಾಡುತ್ತಿದ್ದ ವೇಳೆ ದಾಳಿ ನಡೆಸಲಾಗಿದ್ದು, ಸುಮಾರು 2.5 ಕ್ವಿಂಟಾಲ್ ಗೂ ಹೆಚ್ಚಿನ ಗೋ ಮಾಂಸ ತುಂಬಿದ್ದ ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿ ರಿಕ್ಷಾ ಚಾಲಕನನ್ನು ಬಜರಂಗದಳ ಕಾರ್ಯಕರ್ತರು ಉರ್ವ ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -