- Advertisement -
- Advertisement -



ಉಡುಪಿ : ಭೈರಂಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಂತ್ಯಾರು 5 ಸೆಂಟ್ಸ್ ಕಾಲೋನಿಯ ಬಳಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಉರಿದ ಕಾರಣ ಸುಮಾರು ಎರಡು ಎಕರೆ ಗುಡ್ಡೆ ಪ್ರದೇಶ ಅಗ್ನಿಗೆ ಆಹುತಿಯಾಯಿತು,
ಆದರೆ ಜನ ವಸತಿ ಪ್ರದೇಶಗಳಿಗೆ ಯಾವುದೇ ಹಾನಿಯಾಗದಂತೆ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಸುಮನ ರವರ ನೇತೃತ್ವದಲ್ಲಿ ಗ್ರಾಮಸ್ಥರೊಂದಿಗೆ ಅಗ್ನಿಶಾಮಕದಳದ ಸಿಬ್ಬಂದಿಗಳನ್ನು ಸೂಕ್ತ ಸಮಯದಲ್ಲಿ ಕರೆಸಿ ಬೆಂಕಿಯನ್ನು ಹತೋಟಿಗೆ ತಂದು ನಂದಿಸಲಾಯಿತು. ವಿಶೇಷವಾಗಿ ಸುತ್ತಮುತ್ತಲಿನ ಪುಟಾಣಿ ಮಕ್ಕಳು ಕಾಳಜಿ ವಹಿಸಿ ಉತ್ಸಾಹ ದೊಂದಿಗೆ ಬೆಂಕಿನಂದಿಸುವಲ್ಲಿ ಶ್ರಮಿಸಿದರು. ಮಕ್ಕಳ ಈ ನಡೆ ಗ್ರಾಮಕ್ಕೆ ಪ್ರೋತ್ಸಾಹದಾಯಕವಾಯಿತು. ಶ್ರಮಿಸಿದ ಎಲ್ಲಾ ಗ್ರಾಮಸ್ಥರಿಗೆ ಧನ್ಯವಾದಗಳ ಜೊತೆಗೆ ಮುಂದಿನ ದಿನಗಳಲ್ಲಿ ಯಾವುದೇ ಅಗ್ನಿ ಅನಾಹುತ ಆಗದಂತೆ ಮುಂಜಾಗ್ರತೆ ಕ್ರಮವನ್ನು ವಹಿಸಬೇಕಾಗಿ ಡಾ ಸಂತೋಷ್ ಕುಮಾರ್ ಬೈರಂಪಳ್ಳಿ ಶ್ರಮಿಕ ತರುಣರ ತಂಡ ಬೈರಂಪಳ್ಳಿ ಇವರು ವಿನಂತಿಸಿದ್ದಾರೆ.

- Advertisement -