Sunday, June 29, 2025
spot_imgspot_img
spot_imgspot_img

ಉಡುಪಿ: ಪತ್ನಿಯ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಪತಿ..!

- Advertisement -
- Advertisement -

ಉಡುಪಿ: ಪತ್ನಿಗೆ ಕತ್ತಿಯಿಂದ ಕಡಿದು, ಪತಿ ಜೀವ ಬೆದರಿಕೆ ಹಾಕಿದ ಘಟನೆ ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ ಹೊನ್ನಲ್ ಎಂಬಲ್ಲಿ ನಡೆದಿದೆ. ಜ್ಯೋತಿ(36) ಹಲ್ಲೆಗೊಳಗಾದ ಮಹಿಳೆ.ಪತಿ ರವೀಂದ್ರ ಜ್ಯೋತಿ ಮೇಲೆ ಹಲ್ಲೆ ನಡೆಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ರವೀಂದ್ರ ಪತ್ನಿ ಜ್ಯೋತಿ ಅವರ ಜೊತೆ ಜಗಳವಾಡಿದ್ದು, ಬಳಿಕ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಜ್ಯೋತಿ ಅವರ ಕೈಗೆ ಗಾಯವಾಗಿದ್ದು, ಅವರು ಪಕ್ಕದಲ್ಲೇ ಇದ್ದ ಅಕ್ಕನ ಮನೆಗೆ ಓಡಿದ್ದಾರೆ. ಈ ವೇಳೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲವೆಂದು ರವೀಂದ್ರ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Related news

error: Content is protected !!