- Advertisement -
- Advertisement -


ಉಡುಪಿ: ಸಂತೆಕಟ್ಟೆ ಸಮೀಪವಿರುವ ಆಶಿರ್ವಾದ್ ಪೆಟ್ರೋಲ್ ಪಂಪಿನ ಬಳಿ ಕೊಲೆ ಹಾಗೂ ಆತ್ಮಹತ್ಯೆ ನಡೆದ ಘಟನೆ ಸಂಭವಿಸಿದೆ.
ಹಾಡಹಗಲೇ ಈ ಕೃತ್ಯ ನಡೆದಿದ್ದು ಜನತೆಯನ್ನು ಬೆಚ್ಚಿ ಬೀಳಿಸಿದೆ. ಬೈಕ್ನಲ್ಲಿ ಬಂದಿರುವ ಜೋಡಿ ರಸ್ತೆ ಬದಿ ಮಾತನಾಡುತ್ತಲೇ ವಾಗ್ವಾದಕ್ಕಿಳಿದು ಚೂರಿಯಲ್ಲಿ ಇರಿದು ಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿದುಬಂದಿದೆ. ಸದ್ಯ ಇಬ್ಬರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆಂದು ತಿಳಿದು ಬಂದಿದೆ. ಹೆಚ್ಚಿನ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.

- Advertisement -