- Advertisement -
- Advertisement -
ಉಳ್ಳಾಲ: ಮಟ್ಕಾ ಅಡ್ಡೆಗೆ ದಾಳಿ ನಡೆಸಿ ನಾಲ್ವರನ್ನು ಬಂಧಿಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಒಳಪೇಟೆಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಳ್ಳಾಲಬೈಲ್ ನ ನಿವಾಸಿ ಮಧುಸೂದನ್ (50), ತೌಡುಗೋಳಿ ಕ್ರಾಸ್ನ ಮುಸ್ತಫಾ (50), ಪೆರ್ಮನ್ನೂರು ಗ್ರಾಮದ ಫಕೀರಪ್ಪ (38), ದೇರಳಕಟ್ಟೆಯ ಖಾದಿರ್ ಮೊಯ್ದಿನ್ (65) ಎಂಬವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳಿಂದ 3260ರೂ. ನಗದು ಹಾಗೂ ಇತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.
- Advertisement -