Monday, April 29, 2024
spot_imgspot_img
spot_imgspot_img

ಯುವಕನ ಕಿರುಕುಳ‌ ತಾಳಲಾರದೆ ವಿಷ ಸೇವಿಸಿ ಬಾಲಕಿ ಆತ್ಮಹತ್ಯೆಗೆ ಶರಣು..!

- Advertisement -G L Acharya panikkar
- Advertisement -

ಫೋನಿನಲ್ಲಿ ಯುವಕನ ಕಿರುಕುಳ‌ ತಾಳಲಾರದೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳದ‌ ಉಚ್ಚಲಕುಂಟ ಗ್ರಾಮದಲ್ಲಿ ನಡೆದಿದೆ.

ಕಿರುಕುಳ ನೀಡುತ್ತಿದ್ದ ಯುವಕ ಪುರುಷೋತ್ತಮ ಹಾಗೂ ಬಾಲಕಿ ಪೂಜಾ ಯಡ್ಡೋಣಿ (16) ಎಂದು ಗುರುತಿಸಲಾಗಿದೆ.

ಪುರುಷೋತ್ತಮ ಎನ್ನುವ ಯುವಕ ಪೂಜಾಳ‌ ಮನೆಯ ಮೊಬೈಲ್​ಗೆ ಕರೆ ಮಾಡುತ್ತಿದ್ದ. ಬೇರೊಂದು ನಂಬರ್ ಮೂಲಕ‌‌ ಹಲವು ಬಾರಿ ಕಾನ್ಫರೆನ್ಸ್ ಕಾಲ್ ಮಾಡಿ ಕಿರುಕುಳ‌ ನೀಡುತ್ತಿದ್ದ. ಯುವಕನ ಕಿರುಕುಳ‌ ತಾಳಲಾರದೇ ಎಪ್ರಿಲ್ 7 ರಂದು ಪೂಜಾ ವಿಷ ಸೇವಿಸಿದ್ದಳು ಎಂದು ಪೋಷಕರು ಆರೋಪಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಪೂಜಾ ಸಾವನ್ನಪ್ಪಿದ್ದಾಳೆ. ಈ ಹಿನ್ನೆಲೆಯಲ್ಲಿ ಆರೋಪಿ ಪುರಷೋತ್ತಮನ ಬಂಧನಕ್ಕೆ‌ ಆಗ್ರಹಿಸಿರುವ ಉಚ್ಚಲಕುಂಟ ಗ್ರಾಮಸ್ಥರು ಬೇವೂರು ಪೊಲೀಸ್ ಠಾಣೆ ಎದುರು ಪೂಜಾ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.

- Advertisement -

Related news

error: Content is protected !!