- Advertisement -
- Advertisement -


ಉಪ್ಪಿನಂಗಡಿ: ವ್ಯಕ್ತಿಯೊರ್ವರು ಮನೆಯಿಂದ ನಾಪತ್ತೆಯಾದ ಘಟನೆ ಕೊಣಾಜೆ ಗ್ರಾಮದ ಕಡ್ಯ ಮುಚ್ಚಿರೋಡಿ ಎಂಬಲ್ಲಿ ನಡೆದಿದೆ.
ನಾಪತ್ತೆಯಾದ ವ್ಯಕ್ತಿಯನ್ನು ಕೊಣಾಜೆ ಗ್ರಾಮದ ಕಡ್ಯ ಮುಚ್ಚಿರೋಡಿ ನಿವಾಸಿ ಗಿರೀಶ್ ಗೌಡ (46) ಎಂದು ಗುರುತಿಸಲಾಗಿದೆ.
ಈ ಬಗ್ಗೆ ಶಂಕರಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಆಕೆ ಸೊಪ್ಪು ತರಲೆಂದು ಗುಡ್ಡಕ್ಕೆ ಹೋಗಿ ಮಧ್ಯಾಹ್ನ ಊಟಕ್ಕೆಂದು ಹಿಂತಿರುಗಿದಾಗ ಆಕೆಯ ಗಂಡ ಗಿರೀಶ್ ಗೌಡ ಮನೆಯಲ್ಲಿ ಕಾಣಿಸದೆ ನಾಪತ್ತೆಯಾಗಿರುವುದು ಕಂಡು ಬಂದಿದೆ. ಮನೆಯಲ್ಲಿ ಅಡಕೆ ಸುಲಿಯುತ್ತಿದ್ದ ಗಿರೀಶ್ ಗೌಡ ಆಕಸ್ಮಿಕವಾಗಿ ಮನೆಯಲ್ಲಿ ಕಾಣದೇ ಇರುವುದರ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಾಪತ್ತೆಯಾಗಿರುವ ಗಿರೀಶ್ ಗೌಡ ರವರು ಧರ್ಮಸ್ಥಳದ ಸ್ವ ಸಹಾಯ ಸಂಘ, ನವೋದಯ ಸಂಘ, ಹಾಗೂ ಬ್ಯಾಂಕಿನಿಂದಲೂ ಸಾಲ ಮಾಡಿದ್ದು, ಹಿಂತಿರುಗಿಸಲಾಗದೆ ಬೇಸರದಲ್ಲಿದ್ದರೆಂದೂ ತಿಳಿಸಿ, ನಾಪತ್ತೆಯಾದ ಗಂಡನನ್ನು ಪತ್ತೆ ಹಚ್ಚಿಕೊಡಬೇಕೆಂದು ಪೊಲೀಸರಿಗೆ ವಿನಂತಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.
- Advertisement -