Saturday, June 28, 2025
spot_imgspot_img
spot_imgspot_img

ವಿ.ಹಿಂ. ಪ ಮುಖಂಡ ಶರಣ್‌‌ ಪಂಪ್‌ವೆಲ್‌‌‌ಗೆ ಸಾಮಾಜಿಕ ಜಾಲತಾಣದಲ್ಲಿ ಧಮ್ಕಿ

- Advertisement -
- Advertisement -

ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್‌ ಶರೀಫ್‌ ಹಾಗೂ ಪುರಸಭೆಯ ಸದಸ್ಯ ಹಸೈನಾರ್‌ ಎನ್ನಲಾದ ಆಡಿಯೋ ವೈರಲ್

ಸೋಮವಾರದಂದು ಈದ್‌ಮಿಲಾದ್‌ ಪ್ರಯುಕ್ತ ಬಿ.ಸಿ ರೋಡ್‌ನ ಕೈಕಂಬದಿಂದ ಪರ್ಲಿಯ, ತಾಳಿಪಡ್ಪು, ಕೈಕಂಬ ಪೊಳಲಿ ದ್ವಾರದ ಬಳಿ ಕೈಕಂಬ ಮಸೀದಿಗೆ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆ ವೇಳೆ ಶರಣ್‌ ಪಂಪ್‌ವೆಲ್‌ ಮತ್ತು ಬಜರಂಗದಳದ ಕಾರ್ಯಕರ್ತರ ಬಂದು ನಿಲ್ಲಬೇಕು ಎಂದು ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್‌ ಶರೀಫ್‌ ಹಾಗೂ ಪುರಸಭೆಯ ಸದಸ್ಯ ಹಸೈನಾರ್‌ ಅವಾಚ್ಯ ಶಬ್ಧದಿಂದ ಬೈದು ಧಮ್ಕಿ ಹಾಕಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಂಡ್ಯ ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈದ್‌ ಮಿಲಾದ್‌ ಮೆರವಣಿಗೆ ವೇಳೆ ಹಿಂದೂಗಳೆಲ್ಲಾ ಓಟ್ಟಾಗಿ ದಾಳಿ ಮಾಡಿದರೆ ಏನಾಗಬಹುದು ಎಂದು ಶರಣ್‌‌ ಪಂಪ್‌ವೆಲ್‌ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಮುಸ್ಲಿಂ ಯುವಕರು ಧ್ವನಿ ಸಂದೇಶದ ಮೂಲಕ ಧಮ್ಕಿ ಹಾಕಿದ ಆಡಿಯೋ ವೈರಲ್ ಆಗಿದೆ.

- Advertisement -

Related news

error: Content is protected !!