

ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ, ಬೊಳ್ಳಿಪರ್ಬೊಡು ತುಳುಸಿರಿ ಹಾಗೂ ಶ್ರೀಧಾಮ ಮಾಣಿಲದ ಬೆಳ್ಳಿಹಬ್ಬ ಮಹೋತ್ಸವ ಸಮಾರೋಪ ಸಮಾರಂಭ ಕಾರ್ಯಕ್ರಮ ಆ. 16 ರಿಂದ 18 ನೇ ಆದಿತ್ಯವಾರದವರೆಗೆ ನಡೆಯಲಿದೆ.
ನಾಳೆ ಆ. 18 ನೇ ಆದಿತ್ಯವಾರದಂದು ಶ್ರೀ ಕ್ಷೇತ್ರದಲ್ಲಿ ಡಾ| ಎಂ ಮೋಹನ್ ಆಳ್ವ, ಅಧ್ಯಕ್ಷರು ಆಳ್ವಾಸ್ ಎಜುಕೇಷನಲ್ ಫೌಂಡೇಶನ್ ಮೂಡಬಿದಿರೆ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಬೆಳ್ಳಿಹಬ್ಬ ಮಹೋತ್ಸವ ಸಮಾರೋಪ ಸಮಾರಂಭವನ್ನು ಸದಾಶಿವ ಶೆಟ್ಟಿ ಕೂಳೂರು ಕನ್ಯಾನ, ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರುಹೇರಂಭ ಇಂಡಸ್ಟ್ರೀಸ್ ಲಿ.ಮುಂಬಯಿ ಇವರು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಇವರ ಶ್ರೀ ಧಾಮ ಮಾಣಿಲ ಹಾಗೂ ಪರಮಪೂಜ್ಯ ಶ್ರೀ ಮುಕ್ತಾನಂದ ಸ್ವಾಮೀಜಿ ಶ್ರೀ ಕ್ಷೇತ್ರ ಕರಿಂಜೆ ಇವರು ಆಶೀರ್ವಚನ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಗ್ರಾಹಕ ವ್ಯವಹಾರ ಆಹಾರ ಮತ್ತು ಸಾರ್ವಜನಿಕ ವಿತರಣೆ, ಭಾರತ, ಡಾ. ತೇಜಸ್ವಿನಿ ಅನಂತಕುಮಾರ್, ಅಧ್ಯಕ್ಷರು ಮತ್ತು ಸಹಸಂಸ್ಥಾಪಕರು ಅದಮ್ಯ ಚೇತನ ಪೌಂಡೇಶನ್ ಬೆಂಗಳೂರು, ತೇಜಸ್ವಿಸೂರ್ಯ ಸಂಸದರು ಬೆಂಗಳೂರು ದಕ್ಷಿಣ ಕ್ಷೇತ್ರ, ಜಯಂತಿ ವೈಷ್ಣವ್, ನಂದಕಿಶೋರ್ ಪ್ರಭುಜೀ ಇಸ್ಕಾನ್ ರಾಜ್ಕೋಟ್ ಮುಂಬೈ, ಸುರೇಂದ್ರ ಕುಮಾರ್ ಉಪಾಧ್ಯಕ್ಷರು ಎಸ್ಡಿಎಂಸಿ ಎಜುಕೇಷನಲ್ ಸೊಸೈಟಿ ಉಜಿರೆ, ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು, ರಾಜೇಶ್ ನಾಯಕ್ ಶಾಸಕರು ಬಂಟ್ವಾಳ, ವೇದವ್ಯಾಸ್ ಕಾಮತ್ ಶಾಸಕರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ, ಹರೀಶ್ ಪೂಂಜಾ ಶಾಸಕರು ಬೆಳ್ತಂಗಡಿ, ಡಾ.ವೈ ಭರತ್ ಶೆಟ್ಟಿ ಶಾಸಕರು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ, ಭಗೀರಥಿ ಮರುಳ್ಯ ಶಾಸಕರು ಸುಳ್ಯ, ಪ್ರತಾಪಸಿಂಹ ನಾಯಕ್ ವಿಧಾನಪರಿಷತ್ ಸದಸ್ಯರು, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾಜಿ ವಿಧಾನಸಭಾ ಸದಸ್ಯರು, ಸುಧೀರ್ ಶೆಟ್ಟಿ ಕಣ್ಣೂರು ಮಹಾಪೌರರು ಮಂಗಳೂರು ಮಹಾನಗರ ಪಾಲಿಕೆ, ಕೃಷ್ಣ ಜೆ ಪಾಲೆಮಾರ್ ಮಾಜಿ ಸಚಿವರು, ಕರ್ನಾಟಕ ಸರಕಾರ, ಶಶಿಧರ ಹೆಗ್ಡೆ ಮಾಜಿ ಮಹಾಪೌರರು ಮಂಗಳೂರು ಮಹಾನಗರ ಪಾಲಿಕೆ, ರಘುನಾಥ ಸೋಮಯಾಜಿ ಎರಕಳ, ಅಧ್ಯಕ್ಷರು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನ ಪಾಣೆಮಂಗಳೂರು, ಜಯಂತ ನಡುಬೈಲು ಚೇರ್ಮೆನ್ ಅಕ್ಷಯ ಕಾಲೇಜು ಪುತ್ತೂರು, ದಿವಾಕರ ಮೂಲ್ಯ ಉದ್ಯಮಿ ಬೆಂಗಳೂರು, ಲೋಕೇಶ್ ಕುಲಾಲ್ ಮಂಜುನಾಥ ಸ್ವೀಟ್ಸ್ ಬೆಂಗಳೂರು, ಜಗದೀಶ ಬಿಲ್ಡರ್ & ಡೆವಲಪರ್ ಉಲ್ಲಾಸ್ನಗರ ಮುಂಬಯಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಡಾ. ಪ್ರಕಾಶ್ ಶೆಟ್ಟಿ ಆಡಳಿತ ನಿರ್ದೇಶಕರು ಬಂಜಾರ ಗ್ರೂಪ್ ಆಫ್ ಹೋಟೆಲ್ಸ್ ಬೆಂಗಳೂರು, ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸದರು ದ ಕ ಜಿಲ್ಲೆ, ಕೋಟ ಶ್ರೀನಿವಾಸ ಪೂಜಾರಿ, ಸಂಸದರು ಉಡುಪಿ ಚಿಕ್ಕಮಗಳೂರು ಜಿಲ್ಲೆ ಇವರನ್ನು ಅಭಿನಂದಿಸಲಾಗುವುದು.
ಮಧ್ಯಾಹ್ನ ಬಳಿಕ ಸ್ಥಳೀಯ ಪ್ರತಿಭೆಗಳಿಂದ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ.
