“ವಿದ್ಯೋಲ್ಲಾಸ ಪ್ರತಿಭಾ ಸಿಂಚನ 2023”
ವಿಟ್ಲ: ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಬೊಳಂತಿಮೊಗರು (ಕನ್ನಡ) ಹಾಗೂ ಸರಕಾರಿ ಪ್ರೌಢಶಾಲೆ ಬೊಳಂತಿಮೊಗರು ಇದರ ಸಂಯುಕ್ತ ಆಶ್ರಯದಲ್ಲಿ ವಿದ್ಯೋಲ್ಲಾಸ ಪ್ರತಿಭಾ ಸಿಂಚನ ಕಾರ್ಯಕ್ರಮವು ದಿನಾಂಕ: 23-12-2023 ಶನಿವಾರ ಅಮೃತಕಲಶ ಕಲಾಮಂದಿರ ಬೊಳಂತಿಮೊಗರುವಿನಲ್ಲಿ ನಡೆಯಲಿರುವುದು.
ಪೂರ್ವಾಹ್ನ 9-30ಕ್ಕೆ ಧ್ವಜಾರೋಹಣ ನಡೆದು, 10ಗಂಟೆಗೆ ಬಹುಮಾನ ವಿತರಣೆಯು ನಡೆಯುವುದು, ಕಂಪ್ಯೂಟರ್ ತರಗತಿ ಹಾಗೂ ದಾಸ್ತಾನು ಕೊಠಡಿಯನ್ನು ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು ವಿಧಾನ ಸಭಾ ಕ್ಷೇತ್ರ ಇವರು ಉದ್ಘಾಟಿಸಲಿರುವರು.
ಶ್ರೀ ಅಬ್ದುಲ್ ರಹಿಮಾನ್, ಪಟ್ಟಣ ಪಂಚಾಯತ್ ಸದಸ್ಯರು ವಿಟ್ಲ ಇವರ ಅಧ್ಯಕ್ಷತೆಯಲ್ಲಿ ಜರಗುವ ಸಭಾ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಸದಸ್ಯರುಗಳಾದ ಕರುಣಾಕರ ನಾಯ್ತೊಟ್ಟು, ಲತಾ ಅಶೋಕ ಪೂಜಾರಿ, ಡೀಕಯ್ಯ ಸುರುಳಿಮೂಲೆ, ಮಂಜುನಾಥನ್ ಎಂ.ಜಿ.ಕ್ಷೇತ್ರ ಶೀಕ್ಷಣಾಧಿಕಾರಿ ಬಂಟ್ವಾಳ, ರಾಘವೇಂದ್ರ ಬಲ್ಲಾಳ್ ಕೆ.ಎಸ್. ಕ್ಷೇತ್ರ ಸಮನ್ವಯಾಧಿಕಾರಿ ಬಂಟ್ವಾಳ ಹಾಗೂ ಹಲವಾರು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿರುವರು.
ಅಪರಾಹ್ನ 6-ಗಂಟೆಗೆ ಸ್ಥಳಿಯ ಅಂಗನವಾಡಿ ಪುಟಾಣಿಗಳಿಂದ ಪ್ರತಿಭಾ ಪ್ರದರ್ಶನ ನಂತರ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಮತ್ತು ನಿವೃತ್ತಿ ಹೊಂದಿರುವ ಹಾಗೂ ವರ್ಗಾವಣೆಗೊಂಡಿರುವ ಶಿಕ್ಷಕ-ಶಿಕ್ಷಕಿಯರಿಗೆ ಸನ್ಮಾನ ಕಾರ್ಯಕ್ರಮವು ಜರಗಲಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.