- Advertisement -
- Advertisement -







ಬಸ್ಸಿನ ಹಿಂಭಾಗ ಚಿತ್ರಗಳನ್ನು ಚಿತ್ರಿಸಿ ವಿಘ್ನೇಶ್ವರ ಬಸ್ಸಿನ ಮಾಲಕ ಆಕಾಶ್ ಪೂಜಾರಿಯವರು ತುಳು ಭಾಷೆ ಮತ್ತು ತುಳುನಾಡಿನ ಪ್ರೀತಿಯನ್ನು ಬಿಂಬಿಸಿದ್ದಾರೆ.
ವಿಘ್ನೇಶ್ವರ ಬಸ್ಸಿನ ಮಾಲಕ ಆಕಾಶ್ ಪೂಜಾರಿಯವರು ತುಳು ಭಾಷೆ ಮತ್ತು ತುಳುನಾಡಿನ ಬಗ್ಗೆ ಇವರಿಗಿರುವ ಪ್ರೀತಿಯನ್ನು ತನ್ನ ಬಸ್ಸಿನ ಮೂಲಕ ಹೊರ ರಾಜ್ಯ ಹೊರ ಜಿಲ್ಲೆಯಿಂದ ಬರುವ ಪ್ರವಾಸಿಗರು ಅರಿತುಕೊಳ್ಳಬೇಕೆನ್ನುವ ಮನೋಭಾವನೆಯಿಂದ ತನ್ನ ಬಸ್ಸಿನ ಹಿಂದುಗಡೆ ತುಳುನಾಡಿನ ನಕಾಶೆ ಮತ್ತು ತುಳುನಾಡಿನ ಎಲ್ಲಾ ಧರ್ಮ ಪುಣ್ಯಕ್ಷೇತ್ರಗಳನ್ನು ಚಿತ್ರಗಳನ್ನು ಚಿತ್ರಿಸಿ ನೋಡುಗರ ಮನಸ್ಸೋರೆಗೊಳ್ಳುತ್ತಿದೆ.


ಅಷ್ಟೇ ಅಲ್ಲದೆ ತುಳು ಲಿಪಿಯಲ್ಲಿ ನಮ್ಮ ತುಳುನಾಡು ಎಂಬ ಬರಹದೊಂದಿಗೆ ಕಂಗೊಳಿಸುತ್ತಿದೆ. ಮಾಲಕರಿಗೂ ಹಾಗೂ ಸಿಬ್ಬಂದಿ ವರ್ಗಕ್ಕೂ ಸರ್ವತುಳುವರ ಪರವಾಗಿಹೃದಯ ಅಂತರಾಳದ ಅಭಿನಂದನೆ ಸಲ್ಲಿಸಿದ್ದಾರೆ.

- Advertisement -