Sunday, June 29, 2025
spot_imgspot_img
spot_imgspot_img

ಪ್ರಿಯಕರನ ಬ್ಲ್ಯಾಕ್‌ಮೇಲ್‌; ಬೇಸತ್ತು ಲೈವ್ ವಿಡಿಯೋ ಮಾಡುತ್ತಲೇ ನೇಣಿಗೆ ಶರಣಾದ ಮಹಿಳೆ..!!

- Advertisement -
- Advertisement -

ಪ್ರಿಯಕರನ ಬ್ಲ್ಯಾಕ್‌ಮೇಲ್‌ನಿಂದ ಬೇಸತ್ತು ಮಹಿಳೆಯೊಬ್ಬರು ವಿಡಿಯೋ ಮೂಲಕ ಲೈವ್‌ ಮಾಡುತ್ತಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನಲ್ಲಿ ನಡೆದಿದೆ.

ಸುಹಾನಾ ಸೋನಾರ್ (21) ಎಂಬ ಮಹಿಳೆ ವಿಡಿಯೋದಲ್ಲಿ ಮೊದಲು ತಾನು ಎದುರಿಸುವ ಸಮಸ್ಯೆ ಮತ್ತು ಅದಕ್ಕೆ ಕಾರಣರಾದವರ ಹೆಸರನ್ನು ಹೇಳಿ ಬಳಿಕ ನೇಣು ಬಿಗಿದುಕೊಂಡಿದ್ದಾರೆ. ಈಕೆ ನೇಣಿಗೆ ಶರಣಾಗುವ ಮುನ್ನ ಪ್ರಿಯಕರನ ಬ್ಲ್ಯಾಕ್‌ಮೇಲ್​ಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾಳೆ.

ಪ್ರಿಯಕರ ಅಲ್ತಾಫ್‌ ಸುಲೇಮಾನ್‌ ಎಂಬಾತ ಸುಹಾನಾ ಸೋನಾರ್‌ಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಎಂದು ಹೇಳಲಾಗಿದೆ. ʻʻನನ್ನೊಂದಿಗಿರುವ ಫೋಟೊವನ್ನು ನಿನ್ನ ಗಂಡನಿಗೆ ತೋರಿಸುತ್ತೇನೆʼʼ ಎಂಬ ಪ್ರಿಯಕರನ ಬೆದರಿಕೆಗೆ ಹೆದರಿ ಆಕೆ ಪ್ರಾಣ ಕಳೆದುಕೊಂಡಿದ್ದಾಳೆ. ಜತೆಗೆ ಈ ಪ್ರಕರಣದಲ್ಲಿ ರಾಜಕೀಯ ದ್ವೇಷವೂ ಸೇರಿಕೊಂಡಿದೆ.

ಉಪ್ಪಲದಿನ್ನಿ ಗ್ರಾಮದ ಅಲ್ತಾಫ್ ಸುಲೇಮಾನ್ ಮತ್ತು ಸುಹಾನಾಗೆ ಒಂದು ವರ್ಷದ ಹಿಂದೆ ಆತ್ಮೀಯತೆ ಬೆಳೆದು ಅವರಿಬ್ಬರು ಪ್ರೀತಿಸುತ್ತಿದ್ದರು. ಸುಲೇಮಾನ್‌ ಸ್ವಲ್ಪ ಜಾಸ್ತಿಯೇ ಸಲುಗೆ ಬೆಳೆಸಿದ್ದ. ಈ ವಿಷಯ ಸುಹಾನಾ ಪೋಷಕರಿಗೆ ಗೊತ್ತಾಗಿ ಹಿರಿಯರ ಸಮ್ಮುಖದಲ್ಲಿ ಅಲ್ತಾಫ್‌ಗೆ ಆಕೆಯ ಸುದ್ದಿಗೆ ಬರದಂತೆ ತಾಕೀತು ಮಾಡಿದ್ದರು.

ಬಳಿಕ ಸುಹಾನಾಳನ್ನು ಹೊಕ್ಕುಂಡಿ ಗ್ರಾಮದ ಷರೀಫ್ ಸೋನಾರ್ ಜೊತೆಗೆ ಈಚೆಗೆ ಮದುವೆ ಮಾಡಿಕೊಟ್ಟಿದ್ದರು. ಈ ಮದುವೆಯಾದ ಬಳಿಕ ಸುಲೇಮಾನ್‌ ಆಕೆಯನ್ನು ಕಾಡಲು ಆರಂಭಿಸಿದ್ದ. ʻʻಗಂಡನನ್ನು ಬಿಟ್ಟು ಬಾ ಇಲ್ಲವಾದರೆ ನನ್ನೊಂದಿಗಿರುವ ಫೋಟೊ ನಿನ್ನ ಗಂಡನಿಗೆ ತೋರಿಸುತ್ತೇನೆʼʼ ಎಂದು ಸುಹಾನಾಳಿಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಅಲ್ತಾಫ್ ಸುಲೆಮಾನ್.

ಇದರ ಜತೆಗೆ ಸುಹಾನಾಳ ತಂದೆ ಅಸ್ಲಾಂ ಮುಲ್ಲಾ ಅವರಿಗೆ ಇದ್ದ ರಾಜಕೀಯ ದ್ವೇಷವೂ ಈ ಪ್ರಕರಣದ ಜತೆಗೆ ಬೆಸೆದುಕೊಂಡಿದೆ. ಯುನೀಸ್ ಪಾರ್ಥನಳ್ಳಿ ಹಾಗೂ ದಸ್ತಗಿರಸಾಬ್ ಮುಳವಾಡ ಎಂಬವರ ಜತೆ ಅಸ್ಲಾಂ ಮುಲ್ಲಾ ಅವರಿಗೆ ಸಣ್ಣ ಮಟ್ಟಿಗಿನ ವೈಷಮ್ಯ ಇತ್ತು. ದಸ್ತಗಿರಸಾಬ್‌ ಮುಳವಾಡ ಮಗಳಿಗೆ ಇತ್ತೀಚೆಗೆ ಬಾಲ್ಯ ವಿವಾಹ ಮಾಡಲು ಮುಂದಾದಾಗ ಅಧಿಕಾರಿಗಳು ತಡೆದಿದ್ದರು. ಅದಕ್ಕೆ ಅಸ್ಲಾಂ ಮುಲ್ಲಾ ಕಾರಣವೆಂದು ಅವರಿಗೆ ಸಿಟ್ಟಿತ್ತು. ಹೀಗಾಗಿ ಮುಲ್ಲಾನ ಮಗಳ ಭವಿಷ್ಯವೂ ನೆಟ್ಟಗಿರಬಾರದು ಎಂದು ಅವರು ಕಿರುಕುಳ ಕೊಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸುಹಾನಾ ಕಳೆದ ಏಪ್ರಿಲ್‌ 15ರಂದು ತನ್ನ ಬದುಕಿನಲ್ಲಿ ಬಂದ ಸುಲೇಮಾನ್‌, ನಂತರ ನಡುವೆ ಮದುವೆ, ಬಳಿಕ ಆತ ಬ್ಲ್ಯಾಕ್‌ಮೇಲ್‌ ಮಾಡುತ್ತಿರುವುದು, ಹಣಕ್ಕಾಗಿ ಒತ್ತಡ ಹಾಕುವುದು, ಇನ್ನಿಬ್ಬರು ನೀಡುತ್ತಿರುವ ಕಿರುಕುಳಗಳೆಲ್ಲವನ್ನೂ ವಿವರಿಸಿ ವಿಡಿಯೊ ಮಾಡಿದ್ದಾಳೆ. ಬಳಿಕ ವಿಡಿಯೊ ಆನ್‌ ಇರುವಾಗಲೇ ಆಕೆ ನೇಣು ಹಾಕಿಕೊಂಡಿದ್ದು, ಆಕೆಯ ಸಾವಿನ ಸಂಕಟವೂ ದಾಖಲಾಗಿದೆ.

ಘಟನೆಯ ಬಗ್ಗೆ ಸುಹಾನಾ ತಂದೆ ಅಸ್ಲಾಂ ಮುಲ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಧಾನ ಆರೋಪಿ ಸುಲೇಮಾನ್‌ನನ್ನು ಬಂಧಿಸಲಾಗಿದೆ.

- Advertisement -

Related news

error: Content is protected !!