Sunday, June 29, 2025
spot_imgspot_img
spot_imgspot_img

ವಿಟ್ಲ: ಫಲಾನುಭವಿಗಳಿಗೆ ಹಕ್ಕುಪತ್ರ ಮತ್ತು ಪರಿಹಾರ ಧನ ಚೆಕ್ ವಿತರಣೆ

- Advertisement -
- Advertisement -

ವಿಟ್ಲ: ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ ಪ್ರದೇಶದಲ್ಲಿ ವಾಸಿಸುವ ನಿವಾಸಿಗಳಿಗೆ 94ಸಿ, 94ಸಿಸಿ, ಪ್ರಾಕೃತಿಕ ವಿಕೋಪ ಯೋಜನೆಗಳ ನಾನಾ ಫಲಾನುಭವಿಗಳಿಗೆ ಹಕ್ಕುಪತ್ರ, ಪರಿಹಾರ ಧನದ ಚೆಕ್ ವಿತರಣಾ ಕಾರ್ಯಕ್ರಮ ವಿಟ್ಲ- ಬೋಬ್ಬೆಕೇರಿಯಲ್ಲಿರುವ ಗಜಾನನ ಹಾಲ್‌ನಲ್ಲಿ ನಡೆಯಿತು.

ವಿಟ್ಲ ಕಸಬಾ, ಇಡ್ಕಿದು, ಕುಳ, ಕೆದಿಲ, ಬಿಳಿಯೂರು, ಪೆರ್ನೆ, ವಿಟ್ಲಮುಡ್ನೂರು, ಪುಣಚ, ಅಳಿಕೆ, ಕೇಪು, ಪೆರುವಾಯಿ, ಮಾಣಿಲ ಗ್ರಾಮಗಳ ೯೪ಸಿ, ೯೪ಸಿಸಿ, ಪ್ರಾಕೃತಿಕ ವಿಕೋಪ ಯೋಜನೆಗಳ ನಾನಾ ಫಲಾನುಭವಿಗಳಿಗೆ ಹಕ್ಕುಪತ್ರ, ಪರಿಹಾರ ಧನದ ಚೆಕನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ವಿತರಿಸಿದರು.

ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಮೊದಲಾದವರು ಪಾಲ್ಗೊಂಡಿದ್ದರು.

- Advertisement -

Related news

error: Content is protected !!