ಆಟೋ ಮತ್ತು ಸಿಲಿಂಡರ್ ಸಮೇತ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು






ವಿಟ್ಲ: ರೀಫಿಲ್ಗೆ ಇಟ್ಟಿದ್ದ ಗ್ಯಾಸ್ ಸಿಲಿಂಡರ್ನ್ನು ಹಗಲು ಹೊತ್ತಿನಲ್ಲೇ ಕಳ್ಳರು ಎಗರಿಸಿದ ಘಟನೆ ವಿಟ್ಲ ಸಮೀಪದ ಕುಂಡಡ್ಕ ಹಡೀಲು ಎಂಬಲ್ಲಿ ನಡೆದಿದೆ. ಆರೋಪಿಯನ್ನು ಇಡ್ಕಿದು ಒಡ್ಯಡ್ಕ ನಿವಾಸಿ ಅಶ್ರಫ್ ಯಾನೆ ಅಚ್ಚುಕು ಎಂದು ಗುರುತಿಸಲಾಗಿದೆ.
ಹಡೀಲು ನಿವಾಸಿ ಪ್ರವೀಣ್ ಎಂಬವರ ಮನೆಯಲ್ಲಿ ರೀಫಿಲ್ಗೆ ಇಟ್ಟಿದ್ದ ಗ್ಯಾಸ್ ಸಿಲಿಂಡರ್ನ್ನು ಕಳ್ಳರು ಹಗಲು ಹೊತ್ತಿನಲ್ಲೇ ಕದ್ದು ಪರಾರಿಯಾಗಿದ್ದು, ಸಿಸಿ ಕ್ಯಾಮೆರಾದಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿದೆ. ಕೂಡಲೇ ಸಾರ್ವಜನಿಕರು ಕಳ್ಳರ ಹಾದಿಯನ್ನು ಬೆನ್ನುಹತ್ತಿ ಬೇರಿಕೆ ಬಳಿ ಕಳ್ಳರನ್ನು ಅಡ್ಡಗಟ್ಟಿ ವಿಚಾರಿಸಿದ್ದಾರೆ. ಈ ವೇಳೆ ಸಾಕ್ಷಿ ಸಮೇತ ಖದೀಮರು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು, ಕೂಡಲೇ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ವಿಟ್ಲ ಠಾಣಾ ಪೊಲೀಸರು ಆರೋಪಿ ಅಶ್ರಫ್ ಯಾನೆ ಅಚ್ಚೂಕು ಸಹಿತ ಕಳವಾದ ಗ್ಯಾಸ್ ಸಿಲಿಂಡರ್ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈತನೊಂದಿಗೆ ಇನ್ನೊಬ್ಬ ಆಟೋ ಚಾಲಕನೂ ಇದ್ದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದು, ಈತ ಪರಾರಿಯಾಗಿದ್ದಾನೆ.
ವಿಟ್ಲ ಮುಡ್ನೂರು ಕುಂಡಡ್ಕ ಹಳ್ಳಿ ಪ್ರದೇಶವಾಗಿದ್ದು, ಸಜ್ಜನರಿರುವ ಗ್ರಾಮದಲ್ಲಿ ಇದನ್ನೇ ದುರುಪಯೋಗ ಪಡಿಸಿಕೊಂಡ ಅಚ್ಚೂಕು ತನ್ನ ಹಳೇ ಚಾಳಿ ಬುದ್ದಿಯನ್ನೇ ಮುಂದುವರೆಸಿದ್ದಾನೆ. ಈ ಹಿಂದೆ ಈತ ಕಂಬಳಬೆಟ್ಟು ಉರಿಮಜಲು& ಪುತ್ತೂರು ಭಾಗದಲ್ಲಿ ಬೇರೆ ಬೇರೆ ಕಳ್ಳತನ ಹಾಗೂ ನೀಚ ಕೃತ್ಯ ಮಾಡಿದ್ದಾನೆ ಎಂದು ಸಾರ್ವಜನಿಕರಿಂದ ಮಾಹಿತಿ ತಿಳಿದುಬಂದಿದೆ. ಈ ಹಿಂದೆ ಅನೇಕ ಬಾರಿ ಗೂಸಾ ತಿಂದರೂ ಈತನಿಗೆ ಇನ್ನೂ ಬುದ್ಧಿ ಬರಲಿಲ್ಲ. ಈತನಿಗೆ ಇನ್ನು ಪೊಲೀಸರೇ ತಕ್ಕ ಬುದ್ಧಿ ಕಲಿಸಬೇಕಿದೆ.