





ವಿಟ್ಲ: ಶಿಶು ಅಭಿವೃದ್ದಿ ಯೋಜನಾಧಿಕಾರಿ ವಿಟ್ಲ ಸಿಡಿಪಿಓ ಕಚೇರಿ ವಿಟ್ಲ ಇವರಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಸಚಿವೆ ಲಕ್ಷ್ಮೀ ಹೆಬ್ಬಳ್ಕರ್ರವರಿಗೆ ಅಂಗನವಾಡಿ ನೌಕರರ ತುರ್ತು ಬೇಡಿಕೆ ಈಡೇರಿಸುವ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಕುಮಾರ್ರವರ ಮೂಲಕ ಮನವಿ ಸಲ್ಲಿಸಲಾಯಿತು.

“ನಮ್ಮ ಬಾಕಿ ಇರುವ ವೇತನ ತಕ್ಷಣ ಪಾವತಿಸಬೇಕು, ನಮ್ಮ ವೇತನವನ್ನು ಪ್ರತಿ ತಿಂಗಳು 10ನೇ ದಿನಾಂಕದ ಒಳಗೆ ನೀಡಬೇಕು, ಜುಲೈ ತಿಂಗಳಿಂದ ಬಾಕಿ ಇರುವ ವೇತನ ತಕ್ಷಣ ನೀಡಬೇಕು, ಸರಕಾರ ಆದೇಶ ನೀಡಿದಂತೆ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತರಿಗೆ ಮತ್ತು ಸಹಾಯಕಿಯರಿಗೆ ತಕ್ಷಣ ಗ್ರಾಚ್ಯುವಿಟಿ ಮೊತ್ತ ಪಾವತಿಸಬೇಕು. ಮತ್ತು ಇತರ ಸಂಘಟನೆಗಳ ಒತ್ತಡಕ್ಕೆ ಬಲಿ ಬಿದ್ದು ಗ್ರಾಚ್ಯುವಿಟಿ ನೀಡಲು ಮಾಡಿದ ಆದೇಶವನ್ನು ಹಿಂಪಡೆಯಬಾರದು. ಸರಕಾರ ಈಗಾಗಲೇ ನಿರ್ಧರಿಸಿದಂತೆ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಎಲ್.ಕೆಜಿ, ಯುಕೆಜಿ ಪ್ರಾರಂಭಿಸಬೇಕು. ನಾವು ಈಗಾಗಲೇ ತಮಗೆ ಶಾರದ ಕೆ ಇವರಿಂದ ಆಗುತ್ತಿರುವ ಮಹಿಳಾ ದೌರ್ಜನ್ಯ, ಮಾನಸಿಕ ಕಿರುಕುಳದ ಬಗ್ಗೆ ಕಾರ್ಯಕರ್ತೆಯರ ಮೇಲೆ ಅವರು ಇಲ್ಲಸಲ್ಲದ ಆರೋಪ ಹೊರಿಸಿ ಗದರಿಸುವುದು, ಸಿಕ್ಕ ಸಿಕ್ಕಲ್ಲಿ ಕಾರ್ಯಕರ್ತೆಯರ ತುಚ್ಯವಾಗಿ, ಅಗೌರವದಿಂದ ಟೀಕಿಸಿ ಮಾತಾಡಿ ಕಾರ್ಯಕರ್ತೆರನ್ನು ಸಾರ್ವಜನಿಕವಾಗಗಿ ಅವಮಾಣಿಸುವುದು, ಇತ್ಯಾದಿಗಳ ಬಗ್ಗೆ ತಿಳಿಸಿ ಅವರನ್ನು ತಕ್ಷಣ ಕನ್ಯಾನದಿಂದ ವರ್ಗಾಯಿಸಿ ನಾವು ಕೆಲಸ ಮಾಡಲು ಅವಕಾಶ ಮಾಡಿಕೊಡಲು ವಿನಂತಿಸಿದ್ದೆವು. ಕನ್ಯಾನ ಅಂಗನವಾಡು ನೌಕರರು ಸಹಿ ಮಾಡಿದ ಮನವಿಯನ್ನು ನೀಡಿದ್ದೆವು. ಈ ಮನವಿಯನ್ನು ಪರಿಗಣಿಸಲು ಮತ್ತೊಮ್ಮೆ ವಿನಂತಿಸುತ್ತೇವೆ ಎಂದು ಮನವಿ ಸಲ್ಲಿಸಿದರು.
ಈ ವೇಳೆ ಮನವಿಯಲ್ಲಿ ಪ್ರಮುಖ ಬೇಡಿಕೆಗಳನ್ನು ಸಲ್ಲಿಸಲಾಯಿತು:-
- ಪ್ರತಿ ತಿಂಗಳ 10ನೇ ತಾರಿಕಿನ ಒಳಗೆ ವೇತನ ಪಾವತಿ ಆಗಬೇಕು. ಜುಲೈ ತಿಂಗಳಿಂದ ಅಂದರೆ ಕಳೆದ ಎರಡು ತಿಂಗಳಿನಿಂದ ಬಾಕಿ ಇರುವ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು.
- ಈಗಾಗಲೇ ಸರಕಾರ ಆದೇಶ ಮಾಡಿದಂತೆ ತಕ್ಷಣ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚ್ಯುವಿಟಿ ಪಾವತಿ ಮಾಡಬೇಕು.
- ಯಾವುದೇ ಕಾರಣಕ್ಕೂ ಸರಕಾರ ಗ್ರಾಚ್ಯುವಿಟಿ ಪಾವತಿ ಆದೇಶ ಮಾಡಿರುವುದನ್ನು ಅಂಗನವಾಡಿ ನೌಕರರ ವಿರುದ್ದವಾಗಿ ಇರುವ ಕೆಲವು ಅಂಗನವಾಡಿ ಕಾರ್ಯಕರ್ತೆ- ಸಹಾಯಕಿಯರ ಸಂಘಟನೆಗಳ ಒತ್ತಡಕ್ಕೆ ಬಲಿಯಾಗಿ ಹಿಂಪಡೆಯಬಾರದು.
- ಸರಕಾರ ಈಗಾಗಲೇ ನಿರ್ಧರಿಸಿದಂತೆ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಎಲ್.ಕೆಜಿ, ಯುಕೆಜಿ ಪ್ರಾರಂಭಿಸಬೇಕು. ಮತ್ತುಈ ಆದೇಶವನ್ನೂ ಹಿಂಪಡೆಯಬಾರದು.
- ಕನ್ಯಾನ ಮೇಲ್ವಿಚಾರಕಿ ಶಾರದ ಕೆ ಅವರನ್ನು ಕನ್ಯಾನ ವಲಯದಿಂದ ವರ್ಗಾಯಿಸಲೇಬೇಕು. ಅವರನ್ನು ಕಚೇರಿ ಕೆಲಸಕ್ಕೆ ಸೀಮಿತಗೊಳಿಸುವುದು ಉತ್ತಮ

ನಮ್ಮ ಬಾಕಿ ಇರುವ ಸಂಬಳ ತಕ್ಷಣ ನೀಡದಿದ್ದರೆ ಮತ್ತು ತಿಂಗಳ ಸಂಬಳ ಪ್ರತಿ ತಿಂಗಳು ನಿಗದಿತ ಸಮಯದಲ್ಲಿ ಬಾರದಿದ್ದರೆ. ನಾವು ಎಂ.ಪಿ.ಆರ್ ನೀಡುವುದನ್ನು ನಿಲ್ಲಿಸಬೇಕಾಗುತ್ತದೆ. ಮತ್ತು ನಮ್ಮ ಈ ಎಲ್ಲಾ ಬೇಡಿಕೆಗಳಯ ಈಡೇರದಿದ್ದಲ್ಲಿ ನಮ್ಮ ಹೋರಾಟ ಮುಂದೆ ಜಿಲ್ಲಾ ಕೇಂದ್ರದಲ್ಲಿ ಅನಿರ್ಧಿಷ್ಟಕಾಳ ನಡೆಸಬೇಕಾಗಿ ಬರಬಹುದು ಎಂಬೂದನ್ನೂ ಈ ಮೂಲಕ ತಮ್ಮ ಗಮನಕ್ಕೆ ತರುತ್ತಿದ್ದೇವೆ ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ರಿ). ( ಸಿಐಟಿಯು) ವಿಟ್ಲ ಯೋಜನೆ ಸಮಿತಿ ಅಧ್ಯಕ್ಷೆ ವಸಂತಿ ವಿಟ್ಲ, ಕಾರ್ಯದರ್ಶಿ ಲಲಿತಾ ಕೆ.ವಿ. ಮಾಣಿ, ಜಿಲ್ಲಾಕಾರ್ಯದರ್ಶಿ ಲಕ್ಷ್ಮೀ ವಿಟ್ಲ, ಬಿ.ಎಂ.ಭಟ್ ಕಾನೂನು ಸಲಹೆಗಾರ, ಈಶ್ವರಿ ಸಂಘದ ಮುಂಖಡರು, ಕುಮಾರ್ ಜಿಲ್ಲಾ ನಿರೂಪಣಾಧಿಕಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ದ.ಕ, ಇಲಾಖೆಯ ಮೇಲ್ವಿಚಾರಕಿಯರು, ಅಂಗನವಾಡಿ ಶಿಕ್ಷಕಿಯರು/ ಸಹಾಯಕಿಯರು ಉಪಸ್ಥಿತರಿದ್ದರು.
