Sunday, June 29, 2025
spot_imgspot_img
spot_imgspot_img

ವಿಟ್ಲ: ಸಾರಡ್ಕ ಚೆಕ್ ಪೋಸ್ಟ್ ನಲ್ಲಿ ಪೊಲೀಸರಿಂದ ಬಿಗಿ ನಾಕಾಬಂಧಿ!

- Advertisement -
- Advertisement -

ವಿಟ್ಲ: ಪೇಟೆಗೆ ಬರುವ ಅನಗತ್ಯವಾಗಿ ಬರುವ ವಾಹನಗಳ ಮೇಲೆ ವಿಟ್ಲ ಎಸೈ ವಿನೋದ್ ಕುಮಾರ್ ರೆಡ್ಡಿ ನೇತೃತ್ವದಲ್ಲಿ ಪೊಲೀಸರು ಕ್ರಮ ಜರುಗಿಸುತ್ತಿದ್ದಾರೆ.

ವಿಟ್ಲ- ಪುತ್ತೂರು ರಸ್ತೆಯ ಮೇಗಿನಪೇಟೆ, ಮಂಗಳೂರು ರಸ್ತೆಯ ಬೊಬ್ಬೆಕೇರಿ,ಸಾರಡ್ಕ ಚೆಕ್ ಪೋಸ್ಟ್, ಕಾಸರಗೋಡು ರಸ್ತೆಯ ಬಾಕಿಮಾರ್,ಸಾಲೆತ್ತೂರು ರಸ್ತೆಯ ನಾಡಕಚೇರಿ ಬಳಿ ನಾಕಾಬಂಧಿ ಅಳವಡಿಸಿ, ವಾಹನ ಪರಿಶೀಲನೆ ನಡೆಸುತ್ತಿದ್ದಾರೆ. ಸರಿಯಾದ ದಾಖಲೆ ತೋರಿಸದ ವಾಹನ ಮೇಲೆ ಪೊಲೀಸರು ಕ್ರಮ ಜರುಗಿಸುತ್ತಿದ್ದಾರೆ. ಕೇರಳ ಕಡೆಯಿಂದ ಬರುವವರಿಗೆ ಸಾರಡ್ಕ ಚೆಕ್‌ ಪೋಸ್ಟ್ ನಲ್ಲಿ ಪೋಲಿಸರು ತಪಾಸಣೆ ನಡೆಸಿ ಅಗತ್ಯವಾಗಿ ಬರುವವರಿಗೆ ಮಾತ್ರ ಎಂಟ್ರಿ ಕೊಟ್ಟಿದ್ದಾರೆ. ಅನಗತ್ಯವೆನಿಸಿದ್ದಲ್ಲಿ ತಕ್ಕ ಕ್ರಮ ತೆಗೆದುಕೊಂಡಿದ್ದಾರೆ.

- Advertisement -

Related news

error: Content is protected !!