- Advertisement -
- Advertisement -

ವಿಟ್ಲ: ರಸ್ತೆ ಬದಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಅತಿವೇಗದಿಂದ ಬಂದ ಕಾರೊಂದು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಬೋಳಂತೂರು ಗ್ರಾಮದ ತುಳಸೀವನ ಎಂಬಲ್ಲಿ ಈ ಘಟನೆ ನಡೆದಿದೆ.

ರಸ್ತೆ ಬದಿ ದ್ವಿಚಕ್ರ ವಾಹನ ನಿಲ್ಲಿಸಿ ಮನೆಗೆ ಹೋಗಲು ಯುವತಿ ಹೊರಡುತ್ತಿದ್ದಂತೆ ಕಲ್ಲಡ್ಕ ಕಡೆಯಿಂದ ಎನ್.ಸಿ.ರೋಡ್ ಕಡೆಗೆ ಅತಿವೇಗದಲ್ಲಿ ಬಂದ ಇನ್ನೋವಾ ಡಿಕ್ಕಿ ಹೊಡೆದು ಬಳಿಕ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಗಳಿಗೆ ಡಿಕ್ಕಿಹೊಡೆದು ಚರಂಡಿಯಲ್ಲಿ ಇಳಿದಿದೆ. ಇನ್ನೋವಾದಲ್ಲಿದ್ದ ಇಬ್ಬರು ಪ್ರಯಾಣಿಕರಿದ್ದರು. ಈ ಪೈಕಿ ಒಬ್ಬ ಗಾಯಗೊಂಡಿದ್ದಾರೆ. ಯುವತಿ ಅದೃಷ್ಟವಶಾತ್ ಪಾರಾಗಿದ್ದಾರೆ.

- Advertisement -