Sunday, June 29, 2025
spot_imgspot_img
spot_imgspot_img

ವಿಟ್ಲ: ನ್ಯಾಯಾಲಯದ ತಡೆಯಾಜ್ಞೆ ಆದೇಶ ಉಲ್ಲಂಘಿಸಿ ತೆರೆಯಲು ಯತ್ನಿಸಿದ ಡೈರಿ ಫಾರ್ಮ್; ಮಾದುಮೂಲೆ ಅಬ್ದುಲ್ಲಾ ವಿರುದ್ದ ದೂರು

- Advertisement -
- Advertisement -

ವಿಟ್ಲ: ಸಮೀಪದ ಕೋಡಂಚಡ್ಕ ಕೊಲ್ಲಪದವು ಎಂಬಲ್ಲಿ ಮಾದು ಮೂಲೆ ಅಬ್ದುಲ್ಲಾ ಎಂಬವರು ಅಕ್ರಮವಾಗಿ ನಿರ್ಮಿಸಿದ ವಾಣಿಜ್ಯ ಹಸು ಸಾಕಣೆ ಕೇಂದ್ರವನ್ನು ತೆರೆಯುವುದನ್ನು ಪ್ರಶ್ನಿಸಿ ಸಲ್ಲಿಸಿದ ಮನವಿ ಪ್ರಕಾರ ನ್ಯಾಯಾಲಯವು ಈ ಹಿಂದೆ ತಡೆಯಾಜ್ಞೆ ನೀಡಿತ್ತು.

ಈ ಸಂಧರ್ಭದಲ್ಲಿ ಕೂಡ ಕಟ್ಟಡದ ಮಾಲೀಕ ಮಾದು ಮೂಲೆ ಅಬ್ದುಲ್ಲಾ ಎಂಬವರು ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮತ್ತೆ ತೆರೆಯಲು ಯತ್ನಿಸುತ್ತಿದ್ದು ಅದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರುದಾರ ನಾರಾಯಣ ಭಂಡಾರಿ ವಿಟ್ಲ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕೆಡಿಸಲು ಹೊರಟಿರುವ ಸಮಾಜ ಘಾತುಕ ಶಕ್ತಿಗಳನ್ನು ತಕ್ಷಣ ಮಟ್ಟ ಹಾಕಬೇಕು ಹಾಗೂ ಹಸು ಸಾಕಣೆ ಕೇಂದ್ರದ ನೆಪದಲ್ಲಿ ಅಕ್ರಮ ಕಸಾಯಿಖಾನೆ ಕೇಂದ್ರ ನಡೆಸುವ ಶಂಕೆ ಇದೆ. ಈ ಕೃತ್ಯದ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಂಡು ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

- Advertisement -

Related news

error: Content is protected !!