- Advertisement -
- Advertisement -


ವಿಟ್ಲ :ಬಂಟ್ವಾಳ ತಾಲೂಕು ವಿಟ್ಲ ಮೂಡ್ನೂರು ಗ್ರಾಮದ ಮರುವಾಳ ಮೇದಪ್ಪ ರವರ 2 ವರ್ಷದ ಮಗಳಾದ ತ್ರಿಷಾ ಅನಾರೋಗ್ಯದಿಂದ ಚಿಕಿತ್ಸೆ ಫಲಾಕಾರಿಯಾಗದೆ ನಿಧನ ಹೊಂದಿದ್ದು ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಮಗುವಿನ ಚಿಕಿತ್ಸೆಗೆ 4-5 ಲಕ್ಷ ಹಣವನ್ನು ಖರ್ಚು ಮಾಡಿರುತ್ತಾರೆ. ಕಷ್ಟದಲ್ಲಿರುವ ಇವರ ಕುಟುಂಬಕ್ಕೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಧನಸಹಾಯ ನೀಡಲಾಯಿತು.
ಬಂಟ್ವಾಳ ತಾಲೂಕು ವಿಟ್ಲ ಮೂಡ್ನೂರು ಗ್ರಾಮದ ಕಳುವಾಜೆ ಶಶಿಧರ ಪೂಜಾರಿ ಇವರ ಹರ್ನೀಯ ಶಸ್ತ್ರ ಚಿಕಿತ್ಸೆಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಧನಸಹಾಯ ನೀಡಲಾಯಿತು.
ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಮಹೇಂದ್ರ ವರ್ಮಾ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಮಠ, ಮನೀಶ್ ಕುಲಾಲ್, ಪ್ರಜ್ವಲ್ ಘಾಟೆ, ಹರೀಶ್ ಪೂಜಾರಿ ಮರುವಾಳ, ಬಬಿತ ಉಮೇಶ್, ಜೀವನ್ ಉಪಸ್ಥಿತರಿದ್ದರು.
- Advertisement -