Saturday, June 28, 2025
spot_imgspot_img
spot_imgspot_img

ವಿಟ್ಲ:ಜೇಸಿಐ ವಿಠ್ಠಲ್ ನೇತೃತ್ವದಲ್ಲಿ ಜೆ.ಎಫ್ ಎಮ್. ಚಂದ್ರಹಾಸ ಶೆಟ್ಟಿ ಯವರ ಪದಗ್ರಹಣ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಜೇಸಿಐ ವಿಠ್ಠಲ್ ನೇತೃತ್ವದಲ್ಲಿ ಜೆ.ಎಫ್ ಎಮ್. ಚಂದ್ರಹಾಸ ಶೆಟ್ಟಿ ಯವರ ಪದಗ್ರಹಣ ಕಾರ್ಯಕ್ರಮವು ದಿನಾಂಕ 02/ 01/2021 ರ ಶನಿವಾರ ಸಂಜೆ 7 ಗಂಟೆಗೆ ವಿಟ್ಲದ ವಿಠ್ಠಲ್ ಪಿ ಯು ಕಾಲೇಜಿನ ಗೋಲ್ಡನ್ ಜುಬ್ಲಿ ಹಾಲ್ ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಚಂದ್ರಹಾಸ ರೈ ಬಿ(ಮಾಜಿ ರೆಜಿಸ್ಟರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ), ಸೌಜನ್ಯ ಹೆಗ್ಡೆ (ಝೋನ್ ಎಕ್ಸ್ ವಿ, ಜೇಸಿಐ ಇಂಡಿಯಾ), ಹೇಮಲತಾ ಪ್ರದೀಪ್ (ಝೋನ್ ಎಕ್ಸ್ ವಿ, ಜೇಸಿಐ ಇಂಡಿಯಾ)ಮುಖ್ಯ ಅತಿಥಿಗಳಾಗಿದ್ದರು. ಚಂದ್ರಹಾಸ ಶೆಟ್ಟಿ ಯವರು ನೂತನ ಅಧಿಕಾರವನ್ನು ಸ್ವೀಕರಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರದೀಪ್ ಬಾಕಿಲ, ಜಯಕಿಶನ್, ಬಾಲಕೃಷ್ಣ, ಆರ್ಥಿಕ್ ಮತ್ತು ಬಾಬು ಕವಿ ಇವರನ್ನು ಸನ್ಮಾನಿಸಲಾಯಿತು.ಎಲ್ಲಾ ಮಾಜಿ ಜೆಸಿ ಅಧ್ಯಕ್ಷರುಗಳು ಮತ್ತು ಹಲವು ಜೆಸಿಗಳನ್ನು ಅಭಿನಂದಿಸಲಾಯಿತು.

ಜೆ ಎಫ್ ಎಮ್. ದಿನೇಶ್ ಶೆಟ್ಟಿ, ಜೆ ಎಫ್ ಎಮ್. ಚಂದ್ರಹಾಸ ಶೆಟ್ಟಿ, ಜೆ ಎಫ್ ಎಮ್. ಆರ್ಥಿಕ್, ಜೆ ಎಫ್ ಎಮ್. ಪರಮೇಶ್ವರ್ ಹೆಗ್ಡೆ, ಜೆ ಸಿ ಆರ್ ಟಿ. ಅಶ್ವಿನಿ ಡಿ. ಶೆಟ್ಟಿ, ಜೆ ಸಿ ಆರ್ ಟಿ. ಸಾರಿಕ ಚಂದ್ರಹಾಸ ಶೆಟ್ಟಿ, ಜೆ ಜೆ ಸಿ ಪ್ರಶಾಂತ್, ಜೆ ಜೆ ಸಿ ತಕ್ಷಿತ್ ಉಪಸ್ಥಿತರಿದ್ದರು.

ಪದಗ್ರಹಣ ಕಾರ್ಯಕ್ರಮದ ನಂತರ ಆಗಮಿಸಿದ ಎಲ್ಲರಿಗೂ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಕೋವಿಡ್-19 ರ ನಿಯಮಾವಳಿಗಳನ್ನು ಕಾರ್ಯಕ್ರಮದಲ್ಲಿ ಪಾಲಿಸಲಾಯಿತು.

ಮುಂದಿನ ಜೆಸಿ ವಿಟ್ಲ ವಲಯ ದ ಕಾರ್ಯಕ್ರಮಗಳು ಚಂದ್ರಹಾಸ ಶೆಟ್ಟಿ ಯವರ ನಾಯಕತ್ವ ದಲ್ಲಿ ನಡೆಯಲಿದೆ.

- Advertisement -

Related news

error: Content is protected !!