Saturday, May 4, 2024
spot_imgspot_img
spot_imgspot_img

ವಿಟ್ಲ: ಸಿದ್ಧಿವಿನಾಯಕ ಯುವಕ ಮಂಡಲ ಧರ್ಮನಗರ –ಕಂಬಳಬೆಟ್ಟು ವತಿಯಿಂದ “ಕೆಸರ್ದ ಕಂಡಡ್‌ ಒಂಜಿ ದಿನ” ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ : ಸಿದ್ಧಿವಿನಾಯಕ ಯುವಕ ಮಂಡಲ ಧರ್ಮನಗರ –ಕಂಬಳಬೆಟ್ಟು ವತಿಯಿಂದ ತುಳುನಾಡ ಪೆರ್ಮೆದ ಕೆಸರ್ದ ಕಂಡಡ್‌ ಒಂಜಿ ದಿನ ಕಾರ್ಯಕ್ರಮವು ಆ.20ರಂದು ಕಾರ್ಯಾಡಿ ಬೈಲಿನಲ್ಲಿ ನಡೆಯಿತು.

ಬೈಕ್‌ ರ್‍ಯಾಲಿಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡು ಬಳಿಕ ದೀಪ ಪ್ರಜ್ವಲನೆಯನ್ನು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಮುಂಡ್ರಬೈಲು ಇದರ ಧರ್ಮದರ್ಶಿ ಕೃಷ್ಣಪ್ಪ ಪೂಜಾರಿ ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಸಿದ್ದಿವಿನಾಯಕ ಯುವಕ ಮಂಡಲ ಧರ್ಮನಗರ ಇದರ ಅಧ್ಯಕ್ಷ ರಂಜಿತ್ ನೆಕ್ಕರೆ ವಹಿಸಿದ್ದರು. ಕಾರ್ಯಕ್ರಮಕ್ಕೆ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಆಗಮಿಸಿ ಶುಭಹಾರೈಸಿದರು.

ಅತಿಥಿಗಳಾಗಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್‌, ಇಡ್ಕಿದು ಸೇ.ಸ.ಬ್ಯಾಂಕ್‌ ಮಾಜಿ ನಿರ್ದೇಶಕರು ಎಂ ಗೋಪಾಲಕೃಷ್ಣ ಭಟ್‌ MDSDC Bank, ಗೀತಾ ಸಾಹಿತ್ಯ ಸಂಭ್ರಮ ಸಂಯೋಜಕರು ವಿಠಲ ನಾಯಕ್‌ ಕಾರ್ಯಾಡಿ, ಕಂಬಳಬೆಟ್ಟು ಆಕೃತಿ ಕನ್‌ಸ್ಟ್ರಕ್ಷನ್‌ ದಿನೇಶ್‌ ಗೌಡ ಮಾಡ್ತೇಲು, ವಿಟ್ಲಮುಡ್ನೂರು ಗ್ರಾಮ ಪಂಚಾಯತ್‌ ಅಧ್ಯಕ್ಷರು ಪುನೀತ್‌ ಮಾಡ್ತಾರು, ಕೃಷಿಕ ತೀರ್ಥರಾಮ ಸೇನರೆಮಜಲು, ನಿವೃತ್ತ ಯೋಧ ಮೋಹನ್‌.ಕೆ, ದೈವರಾಧಕ ಆನಂದ ದೇವಸ್ಯ, , ನಾರಾಯಣ ಭಟ್ ನೀರಪಳಿಕೆ ಕಬಕ, ಹಿತೇಶ್ ಗೌಡ ಅಮೈ ಮಾಗಣೆ, ನಮಿತಾ ತಾರನಾಥ ಬೋಳಿಗದ್ದೆ, ಮಾಜಿ ಅಧ್ಯಕ್ಷರು ಪ್ರೇಮಲತಾ ವಿಟ್ಲ, ರಾಮಪ್ಪ ಪೂಜಾರಿ ಕಾರ್ಯಾಡಿ ಭಾಗವಹಿಸಿದ್ದರು.

ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಕಾರ್ಯಕ್ರಮದಲ್ಲಿ ವಿಟ್ಲಮುಡ್ನೂರು, ಇಡ್ಕಿದು, ಕುಳ ಈ ಮೂರು ಗ್ರಾಮಗಳ 550 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಎಸ್.ಎಸ್.ಎಲ್.ಸಿ, ಪಿಯುಸಿ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ನಡೆಯಿತು.

Insta: glacharyajewellers
Fb: glacharya
- Advertisement -

Related news

error: Content is protected !!