Wednesday, April 24, 2024
spot_imgspot_img
spot_imgspot_img

ವಿಟ್ಲ: ಮತ್ತೆ ಮುಳುಗಡೆಯಾದ ಸುರಂಬಡ್ಕ ಕಿಂಡಿ ಅಣೆಕಟ್ಟು

- Advertisement -G L Acharya panikkar
- Advertisement -

ವಿಟ್ಲ: ಹಲವು ದಿನಗಳಿಂದ ವಿಪರೀತ ಮಳೆ ಸುರಿಯುತ್ತಿರುವ ಕಾರಣ ಹೊಳೆ ತೊರೆಗಳು ಉಕ್ಕಿ ಹರಿಯುತ್ತಿದೆ. ಅಂತೆಯೇ ವಿಟ್ಲದ ಸುರಂಬಡ್ಕದ ಕಿಂಡಿ ಅಣೆಕಟ್ಟು ಮತ್ತೆ ಮುಳುಗಡೆಯಾಗಿದೆ.

ಪ್ರತಿ ವರ್ಷವು ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಸೇತುವೆ ಮುಳುಗಡೆಗೊಳ್ಳುತ್ತದೆ. ಅಂತೆಯೇ ಈ ಬಾರಿಯೂ ಮುಳುಗಡೆಗೊಂಡಿದೆ. ಅಣೆಕಟ್ಟಿಗೆ ಕಸ, ಮರದ ಕೊಂಬೆ, ದಿಮ್ಮಿಗಳು ಸೇರಿಕೊಂಡಿದೆ. ಹೆಚ್ಚುತ್ತಿರುವ ನೀರಿನ ಮಟ್ಟದಿಂದ ಸೇತುವೆ ಮೇಲಿನಿಂದ ನೀರು ಹಾದು ಹೋಗುತ್ತಿದೆ.

ಚೆಕ್ಕಿದಕಾಡಿನ ಸಂಪರ್ಕ ಕಲ್ಪಿಸುವ ಕಿಂಡಿ ಅಣೆಕಟ್ಟು ಇದಾಗಿದ್ದು ಪಕ್ಕದಲ್ಲೇ ಇದ್ದ ಕೃಷಿ ಭೂಮಿಗೆ ನೀರು ನುಗ್ಗಿ ತೊಂದರೆ ಉಂಟಾಗುತ್ತಿದೆ. ಈ ಸೇತುವೆ ಮೂಲಕ ಸಂಚಾರಿಸುವ ಜನರು ಬೇರೆ ಮಾರ್ಗದ ಮೂಲಕ ಸಂಚಾರಿಸುವ ಪರಿಸ್ಥಿತಿ ಎದುರಾಗಿದೆ. ಈ ಸೇತುವೆಯನ್ನು ಐದಾರು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಆದರೆ ಕಳೆದ ಬಾರಿಯ ನೀರಿನ ಪ್ರವಾಹದಿಂದ ಸೇತುವೆಯ ತಡೆ ಮುರಿದಿದೆ. ಇದರಿಂದ ಇನ್ನೂ ಕೂಡ ಆತಂಕ ಹೆಚ್ಚಾಗಿದೆ.

- Advertisement -

Related news

error: Content is protected !!