Saturday, June 28, 2025
spot_imgspot_img
spot_imgspot_img

ವಿಟ್ಲ: ಕಲಾತಪಸ್ವಿ ಸಾಂಸ್ಕೃತಿಕ ತಂಡದ ಪ್ರಥಮ ವರ್ಷದ ಸಂಭ್ರಮಾಚಣೆ ಪ್ರಯುಕ್ತ “ಪ್ರತಿಭಾ ಪುರಸ್ಕಾರ -2023” ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಕಳೆದ ಒಂದು ವರ್ಷದಿಂದ ವಿಭಿನ್ನ ಕಾರ್ಯಕ್ರಮಗಳ ಮೂಲಕ ಕಲಾಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯನ್ನು ಕಂಡುಕೊಂಡಿರುವ ಕಲಾತಪಸ್ವಿ ಸಾಂಸ್ಕೃತಿಕ ತಂಡದ ಪ್ರಥಮ ವರ್ಷದ ಸಂಭ್ರಮಾಚಣೆ ಪ್ರಯುಕ್ತ ಎಸ್.ಎಸ್.ಎಲ್. ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಸಾಧನೆಗೈದ ಸ್ಥಳೀಯ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮ “ಪ್ರತಿಭಾ ಪುರಸ್ಕಾರ -2023” ವಿದ್ಯಾರ್ಥಿಗಳ ಮನೆಗಳಲ್ಲಿ ನಡೆಯಿತು.

ಇತ್ತೀಚೆಗೆ ನಡೆದ ಪರೀಕ್ಷೆಗಳಲ್ಲಿ ಸಾಧನೆಗೈದ ಸಂಕೇತ್ ಶೆಟ್ಟಿ (SSLC-612 ಅಂಕ), ಪ್ರಥಮ್ ಕುಮಾರ್ (SSLC-587 ಅಂಕ), ಕು.ಅಭಿಜ್ಞಾ (ದ್ವಿತೀಯ ಪಿಯುಸಿ -555ಅಂಕ), ಕು. ಕೀರ್ತಿ(ದ್ವಿತೀಯ ಪಿಯುಸಿ -547ಅಂಕ) ಇವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಲಾತಪಸ್ವಿ ತಂಡದ ನಿರ್ದೇಶಕರಾದ ಜೈದೀಪ್ ಅಮೈ, ದಿನೇಶ್ ಅರ್ಕೆಚ್ಚಾರು, ಧನರಾಜ್ ಅಮೈ, ಜಗದೀಶ್ ನೂಜಿ, ಅಕ್ಷಯ್ ಅರ್ಕೆಚ್ಚಾರು ಉಪಸ್ಥಿತರಿದ್ದರು.

- Advertisement -

Related news

error: Content is protected !!