(ಫೆ.16) ಆದಿತ್ಯವಾರದ ಕಾರ್ಯಕ್ರಮ





ವಿಟ್ಲ: ಭ। ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಬಸದಿ ತೀರ್ಥಂಕರರ ಮತ್ತು ಭ। ಶ್ರೀ ೧೦೦೮ ಶ್ರೀ ಮಹಾವೀರ ಸ್ವಾಮಿ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠೆ ಹಾಗೂ ಯಕ್ಷಿ ಶ್ರೀ ಪದ್ಮಾವತಿ ಅಮ್ಮನವರ ಮತ್ತು ಯಕ್ಷಿ ಶ್ರೀ ಜ್ವಾಲಾಮಾಲಿನಿ ಅಮ್ಮನವರ ಪ್ರತಿಷ್ಠಾ ಮಹೋತ್ಸವವು 13-02-2025ನೇ ಗುರುವಾರದಿಂದ 17-02-2025ನೇ ಸೋಮವಾರದವರೆಗೆ ನಡೆಯಲಿದೆ.

ದಿನಾಂಕ:16-02-2025ನೇ ರವಿವಾರ ಬೆಳಿಗ್ಗೆ 7:00ರಿಂದ ನಿತ್ಯವಿಧಿ ಸಹಿತ ಆಹಾರದಾನ ವಿಧಿ ಶ್ರೀಗಂಧಯಂತ್ರಾರಾಧನಾ ವಿಧಾನ ನಡೆದು ದಿವಾಗಂಟೆ 9: 22 ರಿಂದ 9.32 ರ ಮೀನ ಲಗ್ನದಲ್ಲಿ ಮಂತ್ರನ್ಯಾಸ ಪೂರ್ವಕ ಭಗವಾನ್ ಶ್ರೀ ಚಂದ್ರನಾಥ ತೀರ್ಥಂಕರರ ಮತ್ತು ಭಗವಾನ್ ಶ್ರೀ ಮಹಾವೀರ ತೀರ್ಥಂಕರರ ಕೇವಲಜ್ಞಾನ ಕಲ್ಯಾಣ, ಮುಖವಸ್ಥ ಉದ್ಘಾಟನೆ ನಡೆಯಲಿದೆ. ದಿವಾಗಂಟೆ 1:05ರ ಅಭಿಜಿನ್ ಲಗ್ನದಲ್ಲಿ ಶಿಖರಾರೋಹಣ ಬಳಿಕ ಮಧ್ಯಾಹ್ನ ಗಂಟೆ 2:00ಕ್ಕೆ ಸಮವಸರಣ ಪೂಜೆ, ಯಾಗಮಂಡಲ ಯಂತ್ರಾರಾಧನಾ ವಿಧಾನ, ಸಿದ್ಧ ಚಕ್ರ ಯಂತ್ರಾರಾಧನಾ ವಿಧಾನ, ಅಗ್ನಿತ್ರಯಾರ್ಚನಾ ಪೂರ್ವಕ ನಿರ್ವಾಣ ಕಲ್ಯಾಣ, ಅನ್ನೋದಕ ಮೆರಮಣಿಗೆ, ೧೦೮ ಕಲಶ ಅಭಿಷೇಕ, ಮಹಾಪೂಜೆ ನಡೆಯಲಿದೆ.

ಸಂಜೆ 5:30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಪರಮಪೂಜ್ಯ ಭಾರತಭೂಷಣ ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾಸ್ವಾಮಿ ಶ್ರೀ ಜೈನಮಠ, ಮೂಡುಬಿದಿರೆ, ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿ ಶ್ರೀ ಜೈನ ಮಠ, ಕಾರ್ಕಳ ಇವರು ಆಶೀರ್ವಚನ ಮತ್ತು ಪಾವನ ಸಾನ್ನಿಧ್ಯ ನೀಡಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಡಿ. ಹರ್ಷೇಂದ್ರ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಡಿ. ಹರ್ಷೇಂದ್ರ ಕುಮಾರ್ ರತ್ನಾಕರರಾಜ್ ಅರಸು ಕಿನ್ಯಕ್ಕೆ ಬಲ್ಲಾಳ, ಅರ್ಕುಳ ಬೀಡು ವಜ್ರನಾಭ ಶೆಟ್ಟಿ, ಕರ್ನಾಟಕ ಸರಕಾರ ಮಾಜಿ ಸಚಿವ ರಮಾನಾಥ ರೈ, ವಿಟ್ಲ ಉದ್ಯಮಿ ರಾಧಾಕೃಷ್ಣ ನಾಯಕ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ರಾತ್ರಿ 7: 00ರಿಂದ ಮಂಗಳೂರಿನ ಜೈನ ಸಮಾಜದವರಿಂದ ಸುಕುಮಾರ್ ಬಲ್ಲಾಳ್, ಮಂಗಳೂರು ಇವರ ಸಾಹಿತ್ಯ ಮತ್ತು ನಿರ್ದೇಶನದ ಭಗವಾನ್ ಶ್ರೀ ಚಂದ್ರನಾಥ ತೀರ್ಥಂಕರರ ಪಂಚಕಲ್ಯಾಣ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.