


ವಿಟ್ಲ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ ದ.ಕ, ಕ್ಷೇತ್ರ ಶಿಕ್ಷಾಧಿಕಾರಿಗಳ ಕಛೇರಿ ಬಂಟ್ವಾಳ ಹಾಗೂ ಪಿ ಎಂ ಶ್ರೀ ಸರಕಾರಿ ಪ್ರೌಢಶಾಲೆ ಆರ್ಎಂಎಸ್ಎ ವಿಟ್ಲ ಇದರ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 14 ರ ವಯೋಮಾನದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟ 2025 ನಡೆಯಿತು.

ಬಾಲಕರ ವಿಭಾಗದಲ್ಲಿ ಬಂಟ್ವಾಳ ತಾಲೂಕಿನ ತಂಡ ಪ್ರಥಮ ಹಾಗೂ ಪುತ್ತೂರು ತಾಲೂಕಿನ ತಂಡ ದ್ವಿತೀಯ ಮತ್ತು ಬಾಲಕಿಯರ ವಿಭಾಗದಲ್ಲಿ ಪುತ್ತೂರು ತಾಲೂಕಿನ ತಂಡ ಪ್ರಥಮ ಹಾಗೂ ಬಂಟ್ವಾಳ ತಾಲೂಕಿನ ತಂಡ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭುವನೇಶ್, ಆಶಾ ನಾಯಕ್, ರಝಾಕ್ ಕುಕ್ಕಾಜೆ, ರವಿಪ್ರಕಾಶ್, ನವೀನ್, ಶಿವಪ್ರಸಾದ್ ಶೆಟ್ಟಿ, ಜಯರಾಮ್, ಪ್ರಭಾಕರ ಶೆಟ್ಟಿ, ದಯಾನಂದ ಶೆಟ್ಟಿ, ರಾಜೇಂದ್ರ ರೈ, ಚಕ್ರಪಾಣಿ, ತುಳಸೀ ದಾಸ್, ರಮಾನಾಥ ವಿಟ್ಲ, ಸುರೇಶ್ ಶೆಟ್ಟಿ, ಶೋಬಿತ್ ರಾಜ್, ಸುಧೀರ್, ರಾಜೇಶ್, ಜಗದೀಶ್, ವಿದ್ಯಾಶಂಕರ್, ಫೆಲ್ಸಿಟಾ ಇವಾ ಗಲ್ಬಾವೊ, ಶೀಮತಿ, ರವಿಶಂಕರ್ ಶಾಸ್ತ್ರಿ, ರಶ್ಮಿ ಹರೀಶ್ ಮೊದಲಾದವರು ಉಪಸ್ಥಿತರಿದ್ದರು.









