Tuesday, April 15, 2025
spot_imgspot_img
spot_imgspot_img

ವಿಟ್ಲ: ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ 2025-26 ನೇ ಸಾಲಿನ ವ್ಯವಹಾರದ ಮುನ್ನೋಟದ ಬಗ್ಗೆ ಪತ್ರಿಕಾಗೋಷ್ಠಿ

- Advertisement -
- Advertisement -

3.90 ಕೋಟಿಗೂ ಮೀರಿದ ಲಾಭವನ್ನು ಹಾಗೂ 96 ಶೇಕಡಾ ಸಾಲ ವಸೂಲಾತಿ ಮಾಡುವ ಗುರಿ: ಬ್ಯಾಂಕ್‌ ಅಧ್ಯಕ್ಷ ಹೆಚ್‌ ಜಗನ್ನಾಥ ಸಾಲ್ಯಾನ್‌

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ಸಾಧನೆಯ ಗರಿಮೆಯೊಂದಿಗೆ ಮುಂದಿನ ವ್ಯವಹಾರದ ಮುನ್ನೋಟದ ಬಗ್ಗೆ ಬ್ಯಾಂಕಿನ ಸಭಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಯಿತು.

ಪತ್ರಿಕಾ ಗೋಷ್ಠಿಯಲ್ಲಿ ಬ್ಯಾಂಕ್‌ನ ಅಧ್ಯಕ್ಷ ಹೆಚ್‌ ಜಗನ್ನಾಥ ಸಾಲ್ಯಾನ್‌ ಮಾತನಾಡಿ ’ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಅಭೂತಪೂರ್ವ ಕಾರ್ಯಸಾಧನೆಯೊಂದಿಗೆ “ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿನ್ ತನ್ನ ಸದಸ್ಯ ಬಾಂಧವರ ಮನಸ್ಸಿನಲ್ಲಿ ತನ್ನ ಛಾಪನ್ನು ಅಚ್ಚಳಿಯದಂತೆ ಮೂಡಿಸುತ್ತಾ ಬಂದಿದ್ದು, 2024-25ನೇ ಸಾಲಿನ ಅರ್ಥಿಕ ವರ್ಷದಲ್ಲಿ ತನ್ನ ಗರಿಷ್ಠ ಕಾರ್ಯದಕ್ಷತೆಯನ್ನು ಮೆರೆದು ದಾಖಲೆಯ ರೂ. 3.45 ಕೋಟಿಗೂ ಮಿಕ್ಕಿ ಲಾಭಗಳಿಸಿ ವಿಶೇಷ ಸಾಧನೆಯನ್ನು ಮಾಡಿದೆ.

ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮವನ್ನು ಹೊರತುಪಡಿಸಿ ಜಿಲ್ಲೆಯ ಉಳಿದೆಲ್ಲಾ ತಾಲೂಕಿನ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಬ್ಯಾಂಕ್ ವಿಟ್ಲದಲ್ಲಿ ಪ್ರಧಾನ ಕಛೇರಿ ಮತ್ತು ಕನ್ಯಾನ, ಕಲ್ಲಡ್ಕ, ಬಿ.ಸಿ.ರೋಡು ಹಾಗೂ ಮತ್ತೂರಿನಲ್ಲಿ ಶಾಖೆಗಳನ್ನು ಹೊಂದಿದ್ದು, ಒಟ್ಟು 8515 ಮಂದಿ ಸದಸ್ಯರಿದ್ದು, ರೂ. 2.82 ಕೋಟಿ ಪಾಲು ಬಂಡವಾಳವನ್ನು ಹೊಂದಿರುತ್ತದೆ.

ವರದಿ ವರ್ಷದಲ್ಲಿ ದಾಖಲೆಯ ರೂ. 950 ಕೋಟಿಗಳ ವ್ಯವಹಾರವನ್ನು ದಾಖಲಿಸಿದ್ದು, ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ ಈ ಬಾರಿ 259 ಕೋಟಿ ರೂಪಾಯಿ ಹೆಚ್ಚಿನ ವ್ಯವಹಾರವನ್ನು ಮಾಡಿರುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ರೂ. 134.73 ಕೋಟಿ ರೂಪಾಯಿಗಳ ಠೇವಣಿ ಸಂಗ್ರಹಿಸಿದ್ದು, ಕಳೆದ ಸಾಲಿಗಿಂತ 5.93%ರಷ್ಟು ಹೆಚ್ಚಳವಾಗಿರುತ್ತದೆ, ಅಲ್ಲದೆ 104.13 ಕೋಟಿ ರೂಪಾಯಿಗಳ ಹೊರಬಾಕಿ ಸಾಲಗಳಿದ್ದು ಸಾಲ ವಸೂಲಾತಿಯೂ ಕಳೆದ ಸಾಲಿಗಿಂತ ಹೆಚ್ಚಾಗಿದ್ದು ಶೇಕಡಾ 93.10 ಆಗಿರುತ್ತದೆ.

ಪ್ರಸ್ತುತ ಬ್ಯಾಂಕಿನಲ್ಲಿ 9.08 ಕೋಟಿ ರೂಪಾಯಿ ಮೀಸಲು ನಿಧಿಯಿದ್ದು, ರೂ. 12.43 ಕೋಟಿಗಳ ಇತರ ನಿಧಿಗಳನ್ನು ಹೊಂದಿದ್ದು, ರೂ. 2.40 ಕೋಟಿಗಳ ಚರ ಹಾಗೂ ಸ್ಥಿರಾಸ್ತಿಗಳನ್ನು ಹೊಂದಿರುತ್ತದೆ. ಬ್ಯಾಂಕಿನ ದುಡಿಯುವ ಬಂಡವಾಳ ರೂ. 162.53 ಕೋಟಿಗಳಾಗಿರುತ್ತದೆ. ಬ್ಯಾಂಕ್ ಹಲವಾರು ವರ್ಷಗಳಿಂದ ಆಡಿಟ್ ವರ್ಗಿಕರಣದಲ್ಲಿ ‘ಎ’ ತರಗತಿಯಲ್ಲಿದ್ದು, ಕಳೆದ ಸಾಲಿನಲ್ಲಿ ಶೇಕಡಾ 22 ಡಿವಿಡೆಂಡ್ ನೀಡಿರುತ್ತೇವೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇವರಿಂದ. ಸತತವಾಗಿ ಸಾಧನಾ ಪ್ರಶಸ್ತಿಯನ್ನು ಮುಡಿಗೇರಿಸಿಗೊಂಡಿದೆ. ಉಪ್ಪಿನಂಗಡಿಯಲ್ಲಿ ಬ್ಯಾಂಕಿನ 5 ನೇ ಶಾಖೆಯನ್ನು ಆರಂಭಿಸುವ ಕಾರ್ಯವು ಭರದಿಂದ ಸಾಗುತ್ತಿದ್ದು ಅತೀ ಶೀಘ್ರದಲ್ಲಿ ಲೋಕಾರ್ಪಣೆ ಕಾರ್ಯವನ್ನು ಕೈಗೊಳ್ಳಲಿದ್ದೇವೆ.

ಒಟ್ಟು ವ್ಯವಹಾರ ರೂ. 611 ಕೋಟಿಗಳಾಗಿದ್ದು, ಠೇವಣಾತಿಯು 78.06 ಕೋಟಿ ರೂಪಾಯಿಗಳಾಗಿರುತ್ತದೆ. 41.66 ಕೋಟಿ ರೂಪಾಯಿಗಳ ಹೊರ ವಾಕಿ ಸಾಲ ಇದ್ದು ವಸೂಲಾತಿಯು ಶೇಕಡಾ 93,17 ಆಗಿರುತ್ತದೆ. ಅಂದಾಜು ರೂ. 2.69 ಕೋಟಿ ಲಾಭಗಳಿಸಿರುತ್ತದೆ.

ಕನ್ಯಾನ ಶಾಖೆಯಲ್ಲಿ ಒಟ್ಟು ವ್ಯವಹಾರ 98.64ಕೋಟಿಗಳಾಗಿದ್ದು, ಠೇವಣಾತಿಯು 19.24 ಕೋಟಿ ರೂಪಾಯಿಗಳಾಗಿರುತ್ತದೆ. 11.62 ಕೋಟಿ ರೂಪಾಯಿಗಳ ಹೊರ ದಾಕಿ ಸಾಲ ಇದ್ದು ವಸೂಲಾತಿಯು ಶೇಕಡಾ 98.08 ಆಗಿರುತ್ತದೆ. ಅಂದಾಜು ರೂ. 21.66 ಲಕ್ಷ ಲಾಭಗಳಿಸಿರುತ್ತದೆ.

ಕಲ್ಲಡ್ಕ ಶಾಖೆಯಲ್ಲಿ ಒಟ್ಟು ವ್ಯವಹಾರ ರೂ. 93.01 ಕೋಟಿಗಳಾಗಿದ್ದು, ಠೇವಣಾತಿಯು 10.25 ಕೋಟಿ ರೂಪಾಯಿಗಳಾಗಿರುತ್ತದೆ. 18.59 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇದ್ದು ವಸೂಲಾತಿಯು ಶೇಕಡಾ 95.91 ಆಗಿರುತ್ತದೆ. ಅಂದಾಜು ರೂ 21.83 ಲಕ್ಷ ಲಾಭಗಳಿಸಿರುತ್ತದೆ.

ಬಿ.ಸಿ.ರೋಡ್ ಶಾಖೆಯಲ್ಲಿ ಒಟ್ಟು ವ್ಯವಹಾರ ರೂ. 53.14 ಕೋಟಿಗಳಾಗಿದ್ದು, ಠೇವಣಾತಿಯು 9.78 ಕೋಟಿ ರೂಪಾಯಿಗಳಾಗಿರುತ್ತದೆ. 9.72 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇದ್ದು ವಸೂಲಾತಿಯು ಶೇಕಡಾ 91.70 ಆಗಿರುತ್ತದೆ. ಅಂದಾಜು ರೂ. 8.61 ಲಕ್ಷ ಲಾಭಗಳಿಸಿರುತ್ತದೆ.

ಪುತ್ತೂರು ಶಾಖೆಯಲ್ಲಿ ಒಟ್ಟು ವ್ಯವಹಾರ ರೂ. 93.4 ಕೋಟಿಗಳಾಗಿದ್ದು, ಠೇವಣಾತಿಯು 17.39 ಕೋಟಿ ರೂಪಾಯಿಗಳಾಗಿರುತ್ತದೆ. 16.59 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇದ್ದು ವಸೂಲಾತಿಯು ಶೇಕಡಾ 86.43 ಗಳಾಗಿರುತ್ತದೆ. ಅಂದಾಜು ರೂ. 24.22 ಲಕ್ಷ ಲಾಭ ಗಳಿಸಿರುತ್ತದೆ.

2025-26 ನೇ ಸಾಲಿನಲ್ಲಿ ರೂ. 1000 ಕೋಟಿಗೂ ಮೀರಿದ ವ್ಯವಹಾರವನ್ನು, ರೂ. 155 ಕೋಟಿ ಮೇಲ್ಪಟ್ಟು ಠೇವಣಿ ಸಂಗ್ರಹಣೆ, ರೂ. 125 ಕೋಟಿಗೂ ಮೀರಿದ ಸಾಲ ನೀಡಿಕೆ, ರೂ. 3.90 ಕೋಟಿಗೂ ಮೀರಿದ ಲಾಭವನ್ನು ಹಾಗೂ 96 ಶೇಕಡಾ ಸಾಲ ವಸೂಲಾತಿ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.

ಬ್ಯಾಂಕ್ ಅನುಭವಿ ಆಡಳಿತ ಮಂಡಳಿಯನ್ನು ಹೊಂದಿದ್ದು, ಬ್ಯಾಂಕಿನ ಅಧ್ಯಕ್ಷರಾಗಿ ನಾನು ಹೆಚ್.ಜಗನ್ನಾಥ ಸಾಲಿಯಾನ್ ಕಾರ್ಯನಿರ್ವಹಿಸುತ್ತಾ ಇದ್ದೇನೆ. ಉಪಾಧ್ಯಕ್ಷರಾಗಿ ಮನೋರಂಜನ್ ಕೆ.ಆರ್ ಹಾಗೂ ನಿರ್ದೇಶಕರಾಗಿ ಮೋಹನ್ ಕೆ.ಎಸ್. ವಿಶ್ವನಾಥ ಎಂ. ಗೋವರ್ಧನ ಕುಮಾರ್, ಶ್ರೀ ದಯಾನಂದ ಆಳ್ವ ಕೆ. ರಾಮದಾಸ ಶೆಣೈ, ಸತೀಶ್ ಪಿ, ಭಾಸ್ಕರ್ ಶೆಟ್ಟಿ, ಕೇಶವ ಎ. ದಿವಾಕರ ವಿ. ಶ್ರೀಮತಿ ಜಯಂತಿ ಎಚ್. ರಾವ್, ಶ್ರೀಮತಿ ಶುಭಲಕ್ಷ್ಮಿ, ಪೂವಪ್ಪ ಎಸ್ ಇವರುಗಳು ಸೇವೆ ಸಲ್ಲಿಸುತ್ತಿದ್ದಾರೆ.

ಬ್ಯಾಂಕಿನಲ್ಲಿ 32 ನುರಿತ ಸಿಬ್ಬಂದಿಗಳಿದ್ದು, ಇವರ ಪೂರ್ಣ ಪ್ರಮಾಣದ ಸಹಕಾರದೊಂದಿಗೆ ಶ್ರೀ ಕೃಷ್ಣ ಮುರಳಿ ಶ್ಯಾಮ್. ಕೆ. ಇವರು ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಬ್ಯಾಂಕ್‌ನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುತ್ತಿದ್ದಾರೆ ಎಂದು ತಿಳಿಸಿದರು.

- Advertisement -

Related news

error: Content is protected !!