Saturday, June 28, 2025
spot_imgspot_img
spot_imgspot_img

ವಿಟ್ಲ: ಕೇಪು ಗ್ರಾಮ ಪಂಚಾಯತ್‌ ಕಛೇರಿ ಮುಂಭಾಗ ರಾಜ್ಯ ಸರಕಾರದ ವೈಫಲ್ಯವನ್ನು ಖಂಡಿಸಿ ಪ್ರತಿಭಟನೆ

- Advertisement -
- Advertisement -

ವಿಟ್ಲ:ರಾಜ್ಯ ಸರಕಾರದ ವೈಫಲ್ಯವನ್ನು ಖಂಡಿಸಿ ಕೇಪು ಗ್ರಾಮ ಪಂಚಾಯತ್‌ ಕಛೇರಿ ಮುಂಭಾಗ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ಧೇಶಿಸಿ ಮಾತಾನಾಡಿದ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ಮಾತಾನಾಡಿ ಪಂಚಾಯತ್ ವ್ಯವಸ್ಥೆಯನ್ನು ಬುಡಮೇಲುಗೊಳಿಸುವ ಷಡ್ಯಂತ್ರವನ್ನು ಕಾಂಗ್ರೇಸ್ ಸರಕಾರ ಮಾಡುತ್ತಿದೆ ಹಾಗೂ ಪಂಚಾಯತಿಗೆ ನೀಡುವ ಕೆಲವೊಂದು ಸವಲತ್ತುಗಳನ್ನು ಕಡಿತಗೊಳಿಸುವ ಮೂಲಕ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ ಹಾಗೂ ರಾಜ್ಯ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿಗಳಿಗೆ ಇರಾನ್ ಮತ್ತು ಇಸ್ರೇಲ್ ಯುದ್ಧದ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಹೇಳಿದರು.

ಸಹಕಾರಿ ಸಂಘದ ಅಧ್ಯಕ್ಷ ಜನಾರ್ಧನ್ ಭಟ್ ಮಾತಾಡಿ ಸರಕಾರ ಜನಸಾಮಾನ್ಯರಿಗೆ ಸಹಕಾರ ನೀಡುವುದನ್ನು ಬಿಟ್ಟು ದ್ರೋಹವನ್ನು ಮಾಡುತ್ತಿದೆ ಎಂದರು. ಕೇಪು ಗ್ರಾಮ ಪಂಚಾಯತ್‌ ಅಧ್ಯಕ್ಷ ರಾಘವ ಮಣಿಯಾಣಿ ಮಾತಾನಾಡಿ ಪಂಚಾಯತಿಗೆ ಈ ಹಿಂದೆ ಬಿಜೆಪಿ ಸರಕಾರ ನೀಡುತ್ತಿದ್ದ ಆಶ್ರಯ ಯೋಜನೆಯ ಮನೆ, ಪ್ರಾಕೃತಿಕ ವಿಕೋಪ ಸಂಭವಿಸಿದಾಗ ನೀಡುವ ಪರಿಹಾರವನ್ನು ಕಡಿತಗೊಳಿಸಲಾಗಿದೆ ಹಾಗೂ ಸಿಬ್ಬಂದಿಗಳಿಗೂ ವೇತನ ನೀಡಲು ಈ ಸರಕಾರದಲ್ಲಿ ಹಣವಿಲ್ಲ ಎಂದು ಹೇಳಿದರು.

ಮಾಜಿ ಅಧ್ಯಕ್ಷ ತಾರಾನಾಥ ಆಳ್ವ ಮಾತಾನಾಡಿ ಬೆಲೆ ಏರಿಕೆ,ವಿದ್ಯುತ್ ಬಿಲ್‌ನಲ್ಲಿಯೂ ಸುಲಿಗೆ ಮಾಡಲು ಈ ಸರಕಾರ ಹೊರಟಿದೆ ಎಂದರು.

ಬಿಜೆಪಿ ಪ್ರಮುಖ ರಾಧಕೃಷ್ಣ ಶೆಟ್ಟಿ ಸ್ವಾಗತಿಸಿ, ಭಾಜಪ ಶಕ್ತೀಕೇಂದ್ರ ಸಂಚಾಲಕ ರಾಜೇಶ್ ಕರವೀರ ಧನ್ಯವಾದ ಸಲ್ಲಿಸಿದರು. ಪಂಚಾಯತ್ ಉಪಾಧ್ಯಕ್ಷ ಹೇಮಾವತಿ, ಪಂಚಾಯತ್ ಸದಸ್ಯರಾದ ಯಶಸ್ವೀನಿ ಶಾಸ್ತ್ರೀ, ಪುರುಷೋತ್ತಮ್ ಗೌಡ, ಜಗಜ್ಜೀವನ್ ರಾಮ್ ಶೆಟ್ಟಿ, ಮೋಹಿನಿ, ಧರ್ಮಲತ, ಸಂತೋಷ್,ವನಿತ ಹಾಗೂ ಪಕ್ಷದ ಪ್ರಮುಖರಾದ ಗೋಪಾಲ ಪಾಟಾಳಿ,ಶ್ರೀಕೃಷ್ಣ,ಮಹಾಲಿಂಗ ಪಾಟಾಳಿ,ಸತೀಶ್ ಕುಕ್ಕೆಬೆಟ್ಟು,ಸತೀಶ್ ಕುದ್ದುಪದವು,ಕಿಟ್ಟಣ್ಣ ರೖ,ಅಶೋಕ ಹಾಗೂಬೂತಿನ ಅಧ್ಯಕ್ಷ ಸುರೇಶ್, ಶ್ರೇಯಸ್, ಪ್ರತೀಕ್ ಪಾರ್ಟಿಯ ಪ್ರಮುಖರು,ಗ್ರಾಮಸ್ಥರು ಭಾಗವಹಿಸಿದ್ದರು.

- Advertisement -

Related news

error: Content is protected !!