
ವಿಟ್ಲ: ಬಂಟ್ವಾಳ ತಾಲೂಕು ಗೌಡರ ಯುವ ವೇದಿಕೆ, ವಿಟ್ಲ ಇವರ ನೇತೃತ್ವದಲ್ಲಿ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ (ರಿ.) ಮತ್ತು ಬಂಟ್ವಾಳ ತಾಲೂಕು ಗೌಡರ ಮಹಿಳಾ ಘಟಕ ಶಾಂತಿನಗರ, ವಿಟ್ಲ, ಬಂಟ್ವಾಳ ತಾಲೂಕು, ದ.ಕ. ಇವರ ಸಹಕಾರದೊಂದಿಗೆ, ತಾಲೂಕು ಮಟ್ಟದ ಗೌಡರ ಕ್ರೀಡೋತ್ಸವವು ನ. 20 ರಂದು ಬೆಳಗ್ಗೆ ಗಂಟೆ 9:30ಕ್ಕೆ ವಿಠಲ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ.

ಬಳಿಕ ನಡೆಯುವ ಸಮಾರೋಪ ಸಮಾರಂಭದಲ್ಲಿ ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಮೋನಪ್ಪ ಗೌಡ ಶಿವಾಜಿನಗರ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಸಂಜೀವ ಮಠಂದೂರು, ಕೆ.ಪಿ.ಟಿ.ಸಿ.ಎಲ್. ಬಂಟ್ವಾಳ ಸಹಾಯಕ ಅಭಿಯಂತರರು ಜಯರಾಮ ಎಂ, ಭಾರತೀಯ ಸೇನೆ ಮಾಜಿ ಸೈನಿಕ ಪ್ರವೀಣ್ ನಾಯ್ತೊಟ್ಟು, ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಮಂಜುಳಾ ಕುಶಾಲಪ್ಪ ಗೌಡ ಪೆರಾಜೆ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗೌಡರ ಯಾನೆ ಒಕ್ಕಲಿಗರ ಸಂಘ ವಿಟ್ಲ ಇದರ ಗೌರವಾಧ್ಯಕ್ಷ ಕೆ.ಮೋಹನ್ ಕಾಯರ್ಮಾರ್, ಗೌರವ ಸಲಹೆಗಾರ ಲಿಂಗಪ್ಪ ಗೌಡ ಅಳಿಕೆ, ಮಹಿಳಾ ಘಟಕದ ಅಧ್ಯಕ್ಷೆ ಜಲಜಾಕ್ಷಿ ಪೊನ್ನೆತ್ತಡಿ, ಯುವ ವೇದಿಕೆ ಗೌರವಾಧ್ಯಕ್ಷ ಚಿದಾನಂದ ಗೌಡ ಪೆಲತ್ತಿಂಜ, ಯುವ ವೇದಿಕೆ ಅಧ್ಯಕ್ಷ ದಿನೇಶ್ ಮಾಡ್ತೇಲ್ ಗೌರವ ಉಪಸ್ಥಿತರಿರುವರು.

ಬಳಿಕ ಕಬಡ್ಡಿ, ಹಗ್ಗಜಗ್ಗಾಟ, ವಾಲಿಬಾಲ್, ಗುಂಡು ಎಸೆತ, ಲಕ್ಕಿ ಗೇಮ್, ವೇಗದ ನಡಿಗೆ, ಗುಂಡೆಸೆತ. (ಮಹಿಳೆ ಮತ್ತು ಪುರುಷರು 50 ವರ್ಷ ಮೇಲ್ಪಟ್ಟು), ಮಹಿಳೆಯರಿಗೆ ತ್ರೋಬಾಲ್, ಗುಂಡೆಸೆತ, ಸಂಗೀತ ಕುರ್ಚಿ, ಲಕ್ಕಿ ಗೇಮ್, ಹಗ್ಗ-ಜಗ್ಗಾಟ, ಬಾಲಕ-ಬಾಲಕಿಯರಿಗೆ (5ನೇ ತರಗತಿ ವರೆಗೆ) 100 ಮೀ. ಓಟ, ಸಂಗೀತ ಕುರ್ಚಿ ಹಾಗೂ ಲಕ್ಕಿ ಗೇಮ್, ಬಾಲಕ-ಬಾಲಕಿಯರಿಗೆ (6-10ನೇ ತರಗತಿ ವರೆಗೆ), 100 ಮೀ. ಓಟ, ಸಂಗೀತ ಕುರ್ಚಿ, ಲಕ್ಕಿ ಗೇಮ್, ಗುಂಡು ಎಸೆತ ಹಾಗೂ ಕಬಡ್ಡಿ (ಕಬಡ್ಡಿ 10ನೇ ತರಗತಿ ವರೆಗಿನ ಬಾಲಕರಿಗೆ ಮಾತ್ರ) ಪಂದ್ಯಾಟಗಳು ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿದ್ದಾರೆ.
