


ವಿಟ್ಲ: ಮಹಿಳೆಯೋರ್ವರು ತಮ್ಮ ಬೀದಿ ಬದಿ ವ್ಯಾಪಾರದ ಅಂಗಡಿಯನ್ನು ರಾತ್ರಿ ಶುಚಿಗೊಳಿಸುತ್ತಿದ್ದ ವೇಳೆ ಕಾರು ಚಾಲಕನ ಅಜಾಗರೂಕತೆ ಹಾಗೂ ತೀರಾ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಅಂಗಡಿಗೆ ಅಪಘಾತಪಡಿಸಿದ ಘಟನೆ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ನಡೆದಿದೆ.
ಯೋಗಿಶ ಶೆಟ್ಟಿ ವಿಟ್ಲ ಕಸಬಾ ಗ್ರಾಮ ಬಂಟ್ವಾಳರವರ ದೂರಿನಂತೆ ಅವರ ಪತ್ನಿ ವಿಜಯ ರವರು ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ಕಲ್ಲಡ್ಕ-ಸಾರಡ್ಕ ಸಾರ್ವಜನಿಕ ಡಾಮಾರು ರಸ್ತೆಯ ಪಕ್ಕದಲ್ಲಿ ಪರವಾಣಿಗೆಯನ್ನು ಹೊಂದಿದ ಬೀದಿ ಬದಿ ವ್ಯಾಪಾರದ ಅಂಗಡಿಯನ್ನು ಹೊಂದಿದ್ದು ರಾತ್ರಿ ವಿಜಯರವರು ಅಂಗಡಿಯನ್ನು ಶುಚಿಗೊಳಿಸುತ್ತಿದ್ದ ವೇಳೆ ಆರೋಪಿ ಇಕೊ ಕಾರು ಚಾಲಕ ರಂಜಿತ್ ಕಾರಿನಲ್ಲಿ ಎರಡು ಜನ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಉಕ್ಕುಡ ಕಡೆಯಿಂದ ಅಜಾಗರೂಕತೆ ಹಾಗೂ ತೀರಾ ದುಡುಕುತನದಿಂದ ಚಲಾಯಿಸಿ ಯೋಗಿಶರವರ ಪತ್ನಿಯ ಅಂಗಡಿಗೆ ಅಪಘಾತಪಡಿಸಿರುತ್ತಾನೆ. ಪರಿಣಾಮ ಅಂಗಡಿಯಲ್ಲಿದ್ದ ಕಬ್ಬು ಜ್ಯೂಸ್ ಮಾಡುವ ಯಂತ್ರಕ್ಕೆ ಹಾನಿಯಾಗಿ ಸುಮಾರು 50,000/-ರೂ, ಕಬ್ಬಿಣದ ಟೇಬಲ್ ಗೆ ಹಾನಿಯಾಗಿ 25,000/-ರೂ, ಅಂಗಡಿಯಲ್ಲಿ ಮಾರಾಟಕ್ಕೆ ತಂದಿರಿಸಿದ್ದ ಹಣ್ಣು ಹಂಪಲುಗಳು ಸುಮಾರು 6000/-ರೂಪಾಯಿಯಷ್ಟು ನಷ್ಟ ಉಂಟಾಗಿರುತ್ತದೆ.
ಆರೋಪಿ ಕಾರು ಚಾಲಕ ರಂಜಿತ್ ರವರ ತಲೆಗೆ ಗಾಯವಾಗಿದ್ದು, ಯೋಗಿಶರವರು ಚಿಕಿತ್ಸೆ ಬಗ್ಗೆ ವಿಟ್ಲ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 132/2024 ಕಲಂ: 281, 125(A), 324(4) THE BHARATIYA NYAYA SANHITA 2023 ರಂತೆ ಪ್ರಕರಣ ದಾಖಲಾಗಿರುತ್ತದೆ.